ಕಾಸರಗೋಡು : ಶ್ರೀಪುಷ್ಪಕ ಬ್ರಾಹ್ಮಣ ಸೇವಾ ಸಂಘದ 58ನೇ ರಾಷ್ಟ್ರೀಯ ಸಮ್ಮೇಳನವು ವಿವಿಧ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಂಡಿತು. ಸಮಾರೋಪ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕೆ.ಕೆ. ಸೋಯಾ ಉದ್ಘಾಟಿಸಿದರು.
ಸಾಂಸ್ಕೃತಿಕ ಸಮಾರಂಭವನ್ನು ಅಖಿಲ ಭಾರತ ಬ್ರಾಹ್ಮಣ್ ಫೆಡರೇಶನ್ನ ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರದೀಪ್ ಜ್ಯೋತಿ ಉದ್ಘಾಟಿಸಿದರು. ಕಾಸರಗೋಡು ಶಾಸಕ ಕಲ್ಲಟ್ರ ಮಾಯಿನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮ್ಮೇಳನದ ಅಂಗವಾಗಿ ಸಿದ್ಧಪಡಿಸಲಾಗಿದ್ದ ಸ್ಮರಣ ಸಂಚಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಮಹಿಳಾ ಸಮಾವೇಶವನ್ನು ಮಧೂರು ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಎಸ್. ಶಾನ್ಭೋಗ್ ಉದ್ಘಾಟಿಸಿದರು. ಯುವ ಸಮಾವೇಶವನ್ನು ನಿವೃತ್ತ ಸರ್ಕಾರಿ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಭಟ್ ಉದ್ಘಾಟಿಸಿದರು.
ಸಮ್ಮೇಳನದ ಅಂಗವಾಗಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಎಲ್.ಪಿ. ವಿಶ್ವನಾಥನ್ ಅಧ್ಯಕ್ಷರಾಗಿ, ಕೃಷ್ಣನ್ ನಂಬೀಶನ್ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಪಿ.ಆರ್. ಹರಿ ಖಜಾಂಚಿಯಾಗಿ ಆಯ್ಕೆಯಾದರು.
ಸಮ್ಮೇಳನದ ಅವಲೋಕನವನ್ನು ಸಂಘಟನಾ ಸಮಿತಿ ಅಧ್ಯಕ್ಷ ವಿ.ಎಂ. ಕೃಷ್ಣಪ್ರಸಾದ್ ನಡೆಸಿದರು. ಮುಖ್ಯ ಸಂಯೋಜಕ ಕೆ.ಎಂ. ಸನೋಜ್ ಹಾಗೂ ಪ್ರಧಾನ ಸಂಚಾಲಕ ರಾಜೇಶ್ ಇ. ಮಾತನಾಡಿದರು. ಸುಮಾ ದಿನೇಶ್ ವಂದಿಸಿದರು.

0 Comments