ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಅಷ್ಟ ಬಂಧ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮನ್ನಿಪಾಡಿಯ ಅಲಂಗೋಡು ಶ್ರೀ ಧೂಮಾವತಿ ನೃತ್ಯ ತಂಡದವರಿಂದ ಫ್ಯೂಷನ್ ತಿರುವಾದಿರ"ವು ನೆರೆದಿರುವ ಭಕ್ತ ಜನಸ್ತೋಮರ ಗಮನ ಸೆಳೆಯಿತು. ಶ್ರೀಮತಿ ಓಮನ ರವಿ ಮನ್ನಿಪಾಡಿ, ಶ್ರೀಮತಿ ಪೂರ್ಣಿಮಾ ರಾಜೇಶ್ ಮನ್ನಿಪಾಡಿ, ಕುಮಾರಿ ಅನುಶ್ರೀ, ಶ್ರೀಮತಿ ಶೀಬಾ ಸತೀಶ ಕಾಂತಿಕೆರೆ, ಶ್ರೀಮತಿ ಲತಾ ವಸಂತ ಕಾಂತಿಕೆರೆ, ಶ್ರೀಮತಿ ವಿನಿತಾ ರಾವ್, ಶ್ರೀಮತಿ ಅಶ್ವಿನಿ ಶರತ್, ಡಾ. ಚೈತ್ರ ರವಿ, ಮನ್ನಿಪಾಡಿ,
ಡಾ. ಮೃದುಲ ರಾಘವನ್ ಮ ನ್ನಿಪಾಡಿ ಕು.ಧನಶ್ರೀ, ಕು.ರಮ್ಯ , ಶ್ರೀಮತಿ ಅಮಿತಾ ಶರತ್ ಮನ್ನಿಪಾಡಿ, ಶ್ರೀಮತಿ ಸೌಮ್ಯ ಸುನೀಶ್ ಕಾಂತಿ ಕೆರೆ ಹಾಗೂ ಮುಂತಾದವರು ಶ್ರೀ ಸುಬ್ರಾಯ ದೇವಸ್ಥಾನ ಕಾಟುಕುಕ್ಕೆ ಯ ಸ್ಕಂದಮಂಟಪದಲ್ಲಿ " ತಿರುವಾದಿರ"ಕ್ಕೆ ಹೆಜ್ಜೆ ಹಾಕಿ ಜನಮನ ಸೂರೆಗೊಂಡರು. ಖ್ಯಾತ ರಂಗಭೂಮಿ ನಟ, ನಿರ್ದೇಶಕ
ಶ್ರೀ ಉದಯಕುಮಾರ್ ಮನ್ನಿ ಪಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರವಿ ಮಣಿಯಾಣಿ, ಶ್ರೀ kunhiರಾಮಮಣಿಯಾಣಿ, ಶ್ರೀ ರಾಘವ ಮನ್ನಿಪಾಡಿ, ಶ್ರೀ ಜಯಕುಮಾರ್ ಮನ್ನಿಪಾಡಿ ಹಾಗೂ ಮುಂತಾದ ಗಣ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು.
ದೇವಸ್ಥಾನದ ಸಮಿತಿ ಸದಸ್ಯರು ಶಾಲುಹೊದಿಸಿ ಸ್ಮರಣಿಕೆ ನೀಡಿ ಕಲಾವಿದರನ್ನು ಗೌರವಿಸಿದರು!
0 Comments