Ticker

6/recent/ticker-posts

ನಿಲ್ದಾಣದಿಂದ ಹೊರಟ ರೈಲಿಗೆ ಹತ್ತುವ ವೇಳೆ ಕಾಲು ಜಾರಿ ಬಿದ್ದ ಮದ್ಯವಯಸ್ಕ, ಓಡಿ ಬಂದು ರಕ್ಷಿಸಿದ ಕಾಸರಗೋಡು ನಿವಾಸಿ ಪೊಲೀಸ್


 ಕಣ್ಣೂರು:  ನಿಲ್ದಾಣದಿಂದ ಹೊರಟ ರೈಲಿನಲ್ಲಿ ಹತ್ತುವ ವೇಳೆ ಕಾಲು ಜಾರಿ ಬಿದ್ದ ಮದ್ಯ ವಯಸ್ಕನನ್ನು  ಕಾಸರಗೋಡಿನ ಪೊಲೀಸನೊಬ್ಬ ರಕ್ಷಿಸಿದ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಕುಂಡಂಗುಯಿ ಪಾಂಡಿಕಂಡಂ ನಿವಾಸಿ ಎಂ.ಅಭಿಲಾಶ್  ಎಂಬ ಪೊಲೀಸ್ ಇದೀಗ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.  ನಿನ್ನೆ (ಗುರುವಾರ) ಈ ಘಟನೆ ನಡೆದಿದೆ. ಕಣ್ಣೂರು ರೈಲು ನಿಲ್ದಾಣದಿಂದ ಎರ್ನಾಕುಲಂ ಭಾಗಕ್ಕೆ ಹೊರಟ ಪುಣೆ ಎಕ್ಸ್‌ಪ್ರೆಸ್ ರೈಲಿಗೆ ಅಬ್ದುಲ್ಲ ಎಂಬವರು ಹತ್ತಲು ಪ್ರಯತ್ನಿಸಿದ್ದರು. ಈ ವೇಳೆ ಕಾಲು ಜಾರಿದ್ದು ರೈಲಿನಡಿಗೆ ಬೀಳಲು ತೊಡಗಿದಾಗ ಅಲ್ಲೇ ಇದ್ದ ಅಭಿಲಾಶ್ ಓಡಿ ಬಂದು ಅಬ್ದುಲ್ಲರನ್ನು ಎಳೆದು ಪ್ಲಾಟ್ ಫಾರಂಗೆ ತಂದರು. ಈ ಮೂಲಕ ಅಬ್ದುಲ್ಲ ಅವರ ಪ್ರಾಣ ಉಳಿಯಿತು. ಅಭಿಲಾಶ್ ಅವರ ಸಾಹಸ ಎಲ್ಲರ ಪ್ರಶಂಸೆಗೆ ಕಾರಣವಾಯಿತು

Post a Comment

0 Comments