ಪೆರ್ಲ, : ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಪ್ಲಸ್ ವನ್ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮವು ನಡೆಯಿತು.ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಈ ಸಂಬಂಧ ನಡೆದ ಕಾರ್ಯಕ್ರವನ್ನು ಕಾಸರಗೋಡು ಡಿ.ವೈ.ಎಸ್.ಪಿ ಸುನಿಲ್ ಕುಮಾರ್ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿ, ವಿದ್ಯಾರ್ಥಿಗಳು ಈ ಮಟ್ಟದ ಸಾಧನೆಗೆ ಶಾಲಾ ಶಿಸ್ತು ಕಾರಣ ಎಂದು ತಿಳಿಸಿದರು.ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಕರೆನೀಡಿದರು.ಕಾರ್ಯಕ್ರಮದಲ್ಲಿ ಶಾಲಾ ಮೆನೇಜರ್ ಮಿತ್ತೂರ್ ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ನೂತನ ವಿದ್ಯಾರ್ಥಿಗಳಿಗೆ ಶುಭಕೋರಿದರು.ನಿವೃತ್ತ ಅಧ್ಯಾಪಕ ವಾಸುದೇವ ಭಟ್
ಆಡಳಿತ ಮಂಡಳಿ ಸದಸ್ಯರಾದ ಲೋಕನಾಥ ಶೆಟ್ಟಿ ,ಶಿವರಾಮ್ ಭಟ್
ಬಿ ಎಸ್ ಗಾಂಭೀರ್,ಸಂದೇಶ್ ರೈ ,
ಪಿ ಟಿ ಎ ಅಧ್ಯಕ್ಷರಾದ ಸುಧಾಕರ ಕಲ್ಲಗದ್ದೆ,ಮಾತೃ ಸಂಘದ ಅಧ್ಯಕ್ಷೆ ಆಯಿಷಾ,ವಾಣಿಜ್ಯ ವಿಭಾಗದಲ್ಲಿ
ಸಾವಿರದ ಇನ್ನೂರರಲ್ಲಿ ಸಾವಿರ ಇನ್ನೂರು ಅಂಕ ಪಡೆದು ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿನಿ ಶ್ರೀರಂಜಿನಿ,ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ವಿ ಹ್ಯುಮಾನಿಟೀಸ್ ವಿಭಾಗದ ಸಂಕೇತ್ ಮಾತನಾಡಿದರು.ಎಲ್ಲಾ ವಿಷಯದಲ್ಲಿ ಎ ಪ್ಲಸ್ ತೆಗೆದ ಅದೇ ರೀತಿ ತೊಂಬತ್ತು ಶೇಕಡಾ ಮೇಲೆ ಅಂಕ ಗಳಿಸಿ ಸಾಧನೆ ಮಾಡಿದ 35 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪ್ರಿನ್ಸಿಪಾಲ್ ಪದ್ಮನಾಭ ಶೆಟ್ಟಿ ಸ್ವಾಗತಿಸಿ ಅಧ್ಯಾಪಕ ಮಹೇಶ್ ಏತಡ್ಕ ವಂದಿಸಿದರು ಅಧ್ಯಾಪಕಿ ವಾಣಿ.ಕೆ,ಅಧ್ಯಾಪಕ ಸಂದೀಪ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.ಎನ್ ಸಿ ಸಿ ವಿದ್ಯಾರ್ಥಿಗಳು ಕಾಸರಗೋಡು ಡಿ ವೈ ಎಸ್ ಪಿ ಸುನಿಲ್ ಕುಮಾರ್ ಗೆ ವಂದಾನಾರ್ಪಣೆ ನಡೆಸಿದರು.
0 Comments