ತಿರುವನಂತಪುರಂ: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಕೇರಳದ ರಂಜಿತಾರನ್ನು ಫೇಸ್ ಬುಕ್ ಮೂಲಕ ನಿಂದನೆಗೈದ ಡೆಪ್ಯುಟಿ ತಹಶಿಲ್ದಾರ ಖಾಯಂ ಆಗಿ ಸೇವೆಯಿಂದ ಹೊರಗೆ ಹೋಗುವ ಸಾಧ್ಯತೆ ನಿಚ್ಚಳಗೊಂಡಿದೆ. ರಂಜಿತಾರನ್ನು ನಿಂದನೆಗೈದ ಆರೋಪಿ ವೆಳ್ಳರಿಕುಂಡ್ ತಾಲೂಕಿನ ಡೆಪ್ಯುಟಿ ತಹಶಿಲ್ದಾರ್ ಎ.ಪವಿತ್ರನ್ ನನ್ನು ಸೇವೆಯಿಂದಲೇ ವಜಾಗೈಯ್ಯಬೇಕೆಂದು ಕಾಸರಗೋಡು ಜಿಲ್ಲಾಧಿಕಾರಿ ಕೆ.ಇಂಬಶೇಖರನ್ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ. ಹಲವು ಸಲ ಎಚ್ಚರಿಕೆ ನೀಡಿಯೂ ಸಹ ಪವಿತ್ರನ್, ಕಂದಾಯ ಇಲಾಖೆಗೂ ಸರಕಾರಕ್ಕೂ ಕಳಂಕ ತರುವ ರೀತಿಯಲ್ಲಿ ಕಾರ್ಯಾಚರಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರಂಜಿತಾರನ್ನು ನಿಂದನೆಗೈದ ಪವಿತ್ರನ್ ರನ್ನು ಸಸ್ಪೆಂಡ್ ಮಾಡಿದ ಬೆನ್ನಿಗೇ ಹೊಸದುರ್ಗ ಪೊಲೀಸರು ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಅನಂತರ ಅವರನ್ನು ನ್ಯಾಯಾಲಯದಲ್ಲಿ ಹಾಜರಿಪಡಿಸಲಾಗುವುದು.
ಈ ಹಿಂದೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಇ.ಚಂದ್ರಶೇಖರನ್ ವಿರುದ್ದ ನಿಂದನಾತ್ಮಕ ಪೋಸ್ಟ್ ಹಾಕಿದ ಪವಿತ್ರನ್ ರನ್ನು ಸಸ್ಪೆಂಡ್ ಮಾಡಲಾಗಿತ್ತು.
0 Comments