ಮಂಜೇಶ್ವರ: ಹೊಸಂಗಡಿಯಲ್ಲಿ ಬ್ಯುಲ್ಡಿಂಗ್ ಕಂಟ್ರಾಕ್ಟರ್ ರಾಗಿ ಖ್ಯಾತಿ ಪಡೆದಿರುವ ಹೊಸಂಗಡಿ ಬಳಿಯ ಕಟ್ಟೆ ಬಜಾರ್ ನಿವಾಸಿ ವೆಂಕಟೇಶ್ (58) ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ.
ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದು, ಇಂದು ಬೆಳಗ್ಗೆ ಕುಸಿದು ಬಿದ್ದ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಹೊಸಂಗಡಿಯ ಖಾಸಗಿ ಆಸ್ಪತ್ರೆ, ಬಳಿಕ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ವೆಂಕಟೇಶ್ ಮೃತಪಟ್ಟಿದ್ದಾರೆ.
ಕಟ್ಟೆ ಬಜಾರ್ ನಲ್ಲಿರುವ ಚರ್ತುಮುಖ ಜೈನ ಬಸದಿಯ ಮುಂಭಾಗದ ನಿವಾಸಿ ದಿ. ಸೀತಾರಾಮ - ದಿ. ಲೀಲಾವತಿ ದಂಪತಿಗಳ ಪುತ್ರನಾಗಿರುವ ವೆಂಕಟೇಶ್, ಪತ್ನಿ ಸಜಿನ, ಮಕ್ಕಳಾದ: ಶರಣ್, ಅರ್ಜುನ್, ಸಹೋದರ - ಸಹೋದರಿಯಾರಾದ ಅಶೋಕ್, ರಜನಿ, ಶಶಿಕಲಾ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಹೊಸಂಗಡಿ ಪೇಟೆಯಲ್ಲಿ ಕಳೆದ 25 ವರ್ಷಗಳಿಂದ ಬ್ಯುಲ್ಡಿಂಗ್ ಕಂಟ್ರಾಕ್ಟರ್ ರಾಗಿ ವೆಂಕಟೇಶ್ ರವರು ಹೆಸರುವಾಸಿಯಾಗಿದ್ದರು.
0 Comments