ಮಂಜೇಶ್ವರ: ನಾಪತ್ತೆಯಾದ ಮಹಿಳೆಯ ಮೃತದೇಹ ಕೊಳದಲ್ಲಿ ಪತ್ತೆಯಾಗಿದೆ. ಪೈವಳಿಕೆ ಕಾಯರ್ಕಟ್ಟೆ ಬಳಿಯ ಮೂಡಂಬಿಕಾನದ ದಿವಂಗತ ಸತ್ಯನಾರಾಯಣ ಭಟ್ಟರ ಪತ್ನಿ ಶಂಕರಿ ಅಮ್ಮ(78) ಮೃತಪಟ್ಟವರು. ಮನೆಯ ಬಳಿಯ ಅಡಿಕೆ ತೋಟದಲ್ಲಿರುವ ಕೊಳದಲ್ಲಿ ಇವರ ಮೃತದೇಹ ಪತ್ತೆಯಾಗಿದೆ.
ಮೇ 31 ರಂದು ಶಂಕರಿ ಅಮ್ಮ ನಾಪತ್ತೆಯಾಗಿದ್ದರು. ಈ ಬಗ್ಗೆ ಸಹೋದರ ಶ್ರೀನಿವಾಸ ರಾವ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೇಸು ದಾಖಲಿಸಿದ್ದರು. ಈ ಮಧ್ಯೆ ಊರವರು ಹಾಗೂ ಕುಟುಂಬ ಸದಸ್ಯರು ಹುಡುಕಾಟ ನಡೆಸುತ್ತಿರುವ ಮಧ್ಯೆ ನಿನ್ನೆ (ಆದಿತ್ಯವಾರ) ಸಂಜೆ ಮೃತದೇಹ ಪತ್ತೆಯಾಗಿದೆ.
0 Comments