ಬಾಡೂರು : ಸುರಿಯುತ್ತಿರುವ ಧಾರಕಾರ ಮಳೆ ಅಪಾರ ಹಾನಿ ಸಹಿತ ಜೀವ ಆಪಾಯ ಉಂಟಾಗುತ್ತಿದ್ದು ಓಣಿಬಾಗಿಲು ಸಮೀಪದ ಅರಣೆಗುರಿ ಎಂಬಲ್ಲಿ ಪುಟ್ಟ ಬಾಲಕಿಯೋರ್ವಳು ಮನೆ ಸಮೀಪದ ತೋಡಿಗೆ ಕಾಲು ಜಾರಿ ಬಿದ್ದ ಪರಿಣಾಮ ಪ್ರಾಣ ಕಳೆದುಕೊಂಡ ಬಗ್ಗೆ ವರದಿಯಾಗಿದೆ. ಸೋಮವಾರ ಸಂಜೆ 6 ಗಂಟೆಯ ಸುಮಾರಿಗೆ ಈ ದುರಂತ ನಡೆದಿದೆ. ಇಲ್ಲಿನ ಮುಹಮ್ಮದ್ - ಖದೀಜತುಲ್ ಕುಬ್ರ ದಂಪತಿಗಳ ಪುತ್ರಿ ಫಾತಿಮಾತ್ ಹಿಬಾ (7) ಮೃತ ಬಾಲಕಿ. ಈಕೆ ಬಾಡೂರು ಎಎಲ್ ಪಿ ಶಾಲಾ ವಿದ್ಯಾರ್ಥಿನಿ. ಮನೆಯಲ್ಲಿಯೇ ಆಟವಾಡುತ್ತಿದ್ದ ಬಾಲಕಿ ಮಳೆ ಬಿಟ್ಟಾಗ ಸಂಜೆ ಹೊರಗಡೆ ಹೋಗಿದ್ದು ಈ ವೇಳೆ ತಾಯಿ ಮಗುವನ್ನು ಅರಸಿಕೊಂಡು ಹೋದಾಗ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದು ಕಂಡು ಬಂದಿತ್ತೆನ್ನಲಾಗಿದೆ.ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲಾಗಲಿಲ್ಲ.
0 Comments