ಉಪ್ಪಳ : ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಬೆಂಗಳೂರು ಕೊಡಮಾಡಿದ 'ರಾಷ್ಟ್ರೀಯ ಕಲಾರತ್ನ ರಾಜ್ಯ ಪ್ರಶಸ್ತಿʼ ಯನ್ನು ಉಪ್ಪಳ ಐಲ ಶ್ರೀ ಶಾರದಾ ಬೋವಿ ಅನುದಾನಿತ ಹಿರಿಯ ಪ್ರಾಥಾಮಿಕ ಶಾಲೆಯ 6 ನೇ ತರಗತಿ ವಿದ್ಯಾರ್ಥಿ ಗಮನ್ ಉಪ್ಪಳ ಅವರಿಗೆ ನೀಡಲಾಯಿತು. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆಯ ರಾಷ್ಟ್ರೀಯ ನೃತ್ಯ ಕಲಾ ವೈಭವ - 2026 ಕಾರ್ಯಕ್ರಮದಲ್ಲಿ ಗಮನ್ ಉಪ್ಪಳ ರವರಿಗೆ ರಾಷ್ಟ್ರೀಯ ಕಲಾ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಲಾಯಿತು. ಉಪ್ಪಳ ಬಳಿಯ ಮಂಗಲ್ಪಾಡಿ ಕುಕ್ಕಾರ್ ನಿವಾಸಿ ಗೋಪಾಲಕೃಷ್ಣ - ಪೂರ್ಣಿಮಾ ದಂಪತಿಗಳ ಪುತ್ರನಾಗಿರುವ ಗಮನ್ ನೃತ್ಯ ಶಿಕ್ಷಕ ಡಾ. ನಾಟ್ಯಮಯೂರ ಶ್ರೀಕಾಂತ್ ಕೊಂಡಾಣರವರ ಶಿಷ್ಯ ನಾಗಿದ್ದಾನೆ.
*ಹೆಚ್ಚಿನ ಅಪ್ಡೇಟ್ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್*
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments