ಕಾಸರಗೋಡು : ತಮ್ಮನ ಉತ್ತರಕ್ರಿಯೆಯ ನಡುವೆಯೇ ಕುಸಿದುಬಿದ್ದು ಅಣ್ಣ ಮೃತಪಟ್ಟ ಘಟನೆ ನಡೆದಿದೆ. ತೃಕ್ಕರಿಪ್ಪುರ ಆಯಿಟ್ಟಿ ನಗರ ನಿವಾಸಿ ಎಂ. ಲಕ್ಷ್ಮಣ (68) ಮೃತಪಟ್ಟವರು. ತಮ್ಮ ಎಂ. ಗೋಪಾಲನ್ ಅವರ ಅಗಲಿಕೆಯ 12ನೇ ದಿನದ ಕಾರ್ಯಕ್ರಮಗಳಿಗಾಗಿ ತೃಕ್ಕಣ್ಣಾಡ್ ಕ್ಷೇತ್ರಕ್ಕೆ ಲಕ್ಷ್ಮಣ್ ಮತ್ತು ಸಂಬಂಧಿಕರು ಆಗಮಿಸಿದ್ದರು. ಕ್ಷೇತ್ರದ ಹೊರಗೆ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ಲಕ್ಷ್ಮಣ್ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅವರನ್ನು ಪಾಲಕ್ಕುನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ ಪಿ. ಸರಸ್ವತಿ, ಪುತ್ರಿ ಪಿ. ಲಜಿನಾ ಎಂಬಿವರನ್ನು ಅಗಲಿದ್ದಾರೆ.
ಹೆಚ್ಚಿನ ಅಪ್ಡೇಟ್ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments