ಬಂದಡ್ಕ : ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 2026–27ನೇ ಶೈಕ್ಷಣಿಕ ವರ್ಷದ ವಿದ್ಯಾರಂಗ ಕಲಾ–ಸಾಹಿತ್ಯ ವೇದಿ ಹಾಗೂ ವಿವಿಧ ಕ್ಲಬ್ಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಖ್ಯಾತ ಲೇಖಕಿ ಸುನಿತಾ ಕರಿಚ್ಚೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುರಾಜ್ ಮಾಸ್ಟರ್ ವಿವಿಧ ಕ್ಲಬ್ಗಳ ಚಟುವಟಿಕೆಗಳು ಮತ್ತು ಅವುಗಳ ಮಹತ್ವದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ. ಅಧ್ಯಕ್ಷ ಸುರೇಶ್ ಪಿ.ವಿ. ವಹಿಸಿದ್ದರು. ವಿದ್ಯಾರಂಗ ಸಾಹಿತ್ಯ ವೇದಿ ಹಾಗೂ ಶಾಲೆಯ ಪ್ಲಾಟಿನಂ ಜುಬಿಲಿ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಶಾಲೆಯ ಪ್ರಾಂಶುಪಾಲೆ ರೇಖಾದಾಸ್ ಕೆ.ಪಿ. ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಅಜಯ್ ಪಿ.ಎನ್., ಜ್ಯೋತಿಲಕ್ಷ್ಮಿ ಕೆ., ಸೀತಾರಾಮ್, ರೀತಾ ಎನ್.ಟಿ. ಹಾಗೂ ದೇವತೀರ್ಥ ಶುಭ ಹಾರೈಸಿದರು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರ ಶಾಜಿ ಡಿ.ವಿ. ಸ್ವಾಗತಿಸಿ, ವಿದ್ಯಾರಂಗಂ ಸಂಯೋಜಕ ಜಯಪ್ರಕಾಶನ್ ಕೆ. ವಂದಿಸಿದರು.

0 Comments