ಬಂಟ್ವಾಳ : ಬಿಸಿ ರೋಡ್ನಲ್ಲಿ ನಡೆದ ಲಾವಣ್ಯ ಎಂಬ ಯುವತಿಯ ಕೊಕೆ ಪ್ರಕರಣದ ಆರೋಪಿ ಚೇತನ್ ಎಂಬಾತನ ಫೋಟೊ ಮುಂದಿಟ್ಟುಕೊಂಡು ಸಮಾಜದಲ್ಲಿ ದ್ವೇಷ ಬಿತ್ತಲು ಹಾಗೂ ಬಜರಂಗದಳದ ಹೆಸರನ್ನು ತೇಜೋವಧೆ ಮಾಡಲು ವ್ಯವಸ್ಥಿತ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿ ಚೇತನನ ಮೂಲ ಫೋಟೋವನ್ನು ಎಡಿಟ್ (ಮಾರ್ಫ್) ಮಾಡಿ, ಆತನಿಗೆ ಬಜರಂಗದಳದ ಶಾಲನ್ನು ಧರಿಸಿದಂತೆ ಬಿಂಬಿಸಿ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಪೋಸ್ಟ್ಗಳ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಮತ್ತು ತಪ್ಪು ಮಾಹಿತಿ ಹರಡುವ ಇಂತಹ ಕಿಡಿಗೇಡಿಗಳನ್ನು ತಕ್ಷಣವೇ ಗುರುತಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ (SP) ಈ ಮೂಲಕ ವಿಶ್ವ ಹಿಂದೂ ಪರಿಷದ್ ಆಗ್ರಹಿಸಿದೆ.
ಇಂತಹ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗುವುದು ಎಂದು ಸಂಘಟನೆ ಎಚ್ಚರಿಸಿದೆ.

0 Comments