Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಹಸಿರು ಬೆಟ್ಟಗಳ ನಡುವೆ ಹಾಲಿನ ನೊರೆಯಂತೆ ಧುಮುಕುವ ಬೆಳ್ಳಚ್ಚಾಲ್ ಜಲಪಾತದ ವೈಭವ

ಬೆಳ್ಳೂರು : ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳ್ಳಚ್ಚಾಲ್ ಜಲಪಾತ ಹಾಗೂ ಸುತ್ತಮುತ್ತಲಿನ ಹಸಿರು ಬೆಟ್ಟಗಳು ಪ್ರಕೃತಿ ಪ್ರಿಯರು ಮತ್ತು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ. ಸ್ವರ್ಗ–ವಾಣಿನಗರ–ಕಿನ್ನಿಂಗಾರ್ ಭಾಗದ ಗುಡ್ಡಗಾಡು ಪ್ರದೇಶಗಳು ಒಂದರ ಹಿಂದೆ ಒಂದರಂತೆ ಸಾಲಾಗಿ ನಿಂತಿರುವ ದೃಶ್ಯ ನೋಡುಗರ ಮನಸೂರೆಗೊಳ್ಳುತ್ತದೆ.

ತಂಪಾದ ಗಾಳಿಯೊಂದಿಗೆ ಕಣಿವೆಗಳತ್ತ ಸುರಿಯುವ ಮಳೆ, ಹಚ್ಚಹಸಿರಿನ ಪ್ರಕೃತಿ ಮತ್ತು ಮಂಜಿನ ಹೊದಿಕೆಯ ಬೆಟ್ಟಗಳು ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತವೆ. ಈ ಪ್ರಕೃತಿ ಸೊಬಗಿನ ನಡುವೆ ಹರಿಯುವ ಬೆಳ್ಳಚ್ಚಾಲ್ ಜಲಪಾತ ಮಳೆಗಾಲದಲ್ಲಿ ತನ್ನ ಪೂರ್ಣ ವೈಭವದಲ್ಲಿ ಕಂಗೊಳಿಸುತ್ತದೆ.

ಜಲಪಾತದ ಉಗಮವು ಕೇರಳ–ಕರ್ನಾಟಕ ಗಡಿಭಾಗದ ಚೆಂಡತ್ತಡ್ಕ ಪ್ರದೇಶದಲ್ಲಿರುವ, 12 ವರ್ಷಗಳಿಗೊಮ್ಮೆ ಮಾತ್ರ ಸ್ವಯಂಭೂ ಗುಹಾ ಪ್ರವೇಶ ನಡೆಯುವ ಜಾಂಬ್ರಿ ಗುಹೆ ಸಮೀಪದಲ್ಲಿದೆ. ಬೆಟ್ಟದ ಮೇಲ್ಭಾಗದಲ್ಲಿರುವ ಪ್ಲಾಂಟೇಷನ್ ಕಾರ್ಪೊರೇಷನ್‌ನ ಕಲ್ಲುಕ ಪ್ರದೇಶದ ಗೋಡಂಬಿ ತೋಟದ ಹೊಳೆಯಿಂದ ಹರಿದುಬರುವ ನೀರು ಸುಮಾರು 50 ಮೀಟರ್ ಎತ್ತರದಿಂದ ಕಪ್ಪು ಬಂಡೆಗಳ ಮೇಲೆ ಅಪ್ಪಳಿಸಿ ಹಾಲಿನ ನೊರೆಯಂತೆ ಧುಮುಕುವ ದೃಶ್ಯ ಮನಮೋಹಕವಾಗಿದೆ.

ಜಲಪಾತದ ಮೇಲ್ಭಾಗ ದಟ್ಟವಾದ ಕಾಡಿನಿಂದ ಆವರಿಸಿಕೊಂಡಿರುವುದರಿಂದ, ಮರಗಳು ಮತ್ತು ಬಳ್ಳಿಗಳ ಮಧ್ಯೆ ನೀರು ಧುಮುಕುವ ನೋಟ ಇನ್ನಷ್ಟು ಆಕರ್ಷಕವಾಗಿದೆ. ಅಡಿಕೆ ಹಾಗೂ ತೆಂಗಿನ ತೋಟಗಳ ನಡುವೆ ಹರಿಯುವ ಈ ಜಲಪಾತದ ಸೌಂದರ್ಯವೂ ವಿಶೇಷವಾಗಿದೆ.

ಮಳೆಗಾಲದಲ್ಲಿ ಕೇರಳ–ಕರ್ನಾಟಕ ಗಡಿಭಾಗದ ವಿವಿಧ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಶಾಲಾ ವಿದ್ಯಾರ್ಥಿಗಳ ಪ್ರಕೃತಿ ಅಧ್ಯಯನ ಪ್ರವಾಸಕ್ಕೂ ಈ ಪ್ರದೇಶ ಪ್ರಸಿದ್ಧವಾಗಿದೆ.

ಮುಳ್ಳೇರಿಯ ಮೂಲಕ ಬೆಳ್ಳೂರು ಪಂಚಾಯಿತಿಯ ನೆಟ್ಟಣಿಗೆ ಮಾರ್ಗದಿಂದ ಹಾಗೂ ಎಣ್ಮಕಜೆ ಪಂಚಾಯತಿಯ ಸ್ವರ್ಗ–ವಾಣಿನಗರ ಮಾರ್ಗದಿಂದ ಬೆಳ್ಳಚ್ಚಾಲ್ ಜಲಪಾತವನ್ನು ತಲುಪಬಹುದು. ಇಲ್ಲಿಂದ ಗಡಿಭಾಗದ ಅರಣ್ಯ ಪ್ರದೇಶಗಳು, ಮುಳ್ಳೇರಿಯ, ಎಣ್ಮಕಜೆ ಮತ್ತುಕುಂಬ್ಡಾಜೆ ಭಾಗಗಳ ಹಸಿರು ಪ್ರಕೃತಿ ವೈಭವವನ್ನು ಕಣ್ತುಂಬಿಕೊಳ್ಳಬಹುದು.

ಎಲ್ಲಾ ಪ್ರದೇಶಗಳಿಗೆ ಉತ್ತಮ ರಸ್ತೆ ಸಂಪರ್ಕವಿದ್ದರೂ ಸಾರ್ವಜನಿಕ ಸಾರಿಗೆ ಸೌಲಭ್ಯ ಮಾತ್ರ ಸೀಮಿತವಾಗಿದೆ. ಸೂಕ್ತ ಪ್ರವಾಸೋದ್ಯಮ ಮೂಲಸೌಕರ್ಯಗಳ ಕೊರತೆಯಿಂದ ಈ ಪ್ರದೇಶದ ಪ್ರವಾಸಿ ಸಾಮರ್ಥ್ಯ ಇನ್ನೂ ಸಂಪೂರ್ಣವಾಗಿ ಬಳಸಿಕೊಳ್ಳಲಾಗಿಲ್ಲ.

ಪ್ರಕೃತಿಗೆ ಧಕ್ಕೆಯಾಗದ ರೀತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದರೆ, ಬೆಳ್ಳಚ್ಚಾಲ್ ಜಲಪಾತ ರಾಜ್ಯದ ಪ್ರಮುಖ ಪರಿಸರ ಪ್ರವಾಸೋದ್ಯಮ ತಾಣವಾಗಿ ಬೆಳೆಯುವ ಎಲ್ಲ ಸಾಧ್ಯತೆಗಳಿವೆ. ವಿಶೇಷವಾಗಿ ಮಳೆಗಾಲ ಹಾಗೂ ಸಂಜೆ ವೇಳೆಯಲ್ಲಿ ಇಲ್ಲಿನ ನೈಸರ್ಗಿಕ ಸೌಂದರ್ಯ ಪ್ರವಾಸಿಗರಿಗೆ ಮರೆಯಲಾಗದ ಅನುಭವವನ್ನು ನೀಡುತ್ತದೆ.


*ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್*


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement