Ticker

6/recent/ticker-posts

ಜೂನ್ 22ಕ್ಕೆ ಕುಡಾಲ್ಡ ಜವ್ವಣೆರ್ ವಾಟ್ಸಾಪ್ ಗ್ರೂಪ್ ನ ವಿದ್ಯಾ ಸ್ಪೂರ್ತಿ ಯೋಜನೆಯ ಪ್ರತಿಭೋತ್ಸವ

 


ಪೆರ್ಮುದೆ : ಕುಡಾಲ್ಡ ಜವ್ವಣೆರ್ ವಾಟ್ಸಾಪ್ ಗ್ರೂಪ್ ನ ನೇತೃತ್ವದಲ್ಲಿ ವಿದ್ಯಾ ಸ್ಪೂರ್ತಿ ಯೋಜನೆಯ ಪ್ರತಿಭೋತ್ಸವ ಜೂನ್ 22ಕ್ಕೆ  ಸಂಜೆ 3 ಫಂಟೆಗೆಪೆರ್ಮುದೆ BPP ALP ಶಾಲೆಯಲ್ಲಿ ಜರಗಲಿರುವುದು

ಕುಡಾಲುಗುತ್ತು ಗಣೇಶ್ ರೈ ಅವರ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮವನ್ನು ಧರ್ಮತ್ತಡ್ಕ ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್ N ಉದ್ಘಾಟಿಸುವರು. ನಿವೃತ್ತ ಶಿಕ್ಷಕ ಅಬ್ದುಲ್ ಖಾದರ್ ಹಾಜಿ,ಅಂಗಡಿ ಮೊಗರು ಸೇವಾ ಸಹಕಾರಿ ಬೇಂಕ್ ಕಾರ್ಯದರ್ಶಿ ವಿಠಲ್ ರೈ ಮಂಟಾಡಿ, ಕಯ್ಯಾರು ಡೋನ್ ಬೋಸ್ಕೋ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕ ಪೀಟರ್ ರೋಡ್ರಿಗಸ್, ಪೆರ್ಮುದೆBPP ALP ಶಾಲೆ ಮುಖ್ಯ ಶಿಕ್ಷಕ ಸದಾಶಿವ ಬಾಲಮಿತ್ರ,ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ A R ಸುಬ್ಬಯ ಕಟ್ಟೆ,ಕುಡಾಲುಗುತ್ತು ಲಕ್ಷ್ಮೀಶ ಆಳ್ವ  ಖತಾರ್,ವಾರ್ಡ್ ಸದಸ್ಯ ಕುಡಾಲುಗುತ್ತು‌ ಅಶೋಕ ಭಂಡಾರಿ,CA ಮನೀಷ್ ಶೆಟ್ಟಿ ಮುಗೇರು , ಶಮಿತಾ ಉದಯ್ ಶೆಟ್ಟಿ ಕುಡಾಲು ಭಂಡಾರಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಶಿವಪ್ರಸಾದ್ ಶೆಟ್ಟಿ, ಅನಿಲ್ ಶೆಟ್ಟಿ BG,ದಿನೇಶ್ ರೈ BG ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ 2024 - 25ನೇ ಶೈಕ್ಷಣಿಕ ವರ್ಷದಲ್ಲಿ ಶಾಲಾ ಮಟ್ಟದ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ರಂಗದಲ್ಲಿ ವಿಶೇಷ ಸಾಧನೆ ಗೈದ  ಕುಡಾಲುಮೆರ್ಕಳ ಗ್ರಾಮದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ನಗದು ಬಹುಮಾನದೊಂದಿಗೆ  ಅಭಿನಂದನೆ,  ಲಕ್ಷ್ಮೀಶ ಆಳ್ವರ ಪ್ರಾಯೋಜಕತ್ವದಲ್ಲಿ ಕೊಡೆ ವಿತರಣೆ,ಕಲಿಕೆಯಲ್ಲಿ ವಿಶೇಷ ಸಾಮರ್ಥ್ಯವುಳ್ಳ ಆಶಕ್ತ ಆಯ್ದ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ಧನ ಸಹಾಯ ವಿತರಣೆ ಜರಗಲಿದೆ.

Post a Comment

0 Comments