Ticker

6/recent/ticker-posts

ಸಮಾನಾಂತರ ಲಾಟರಿ ಕೇಂದ್ರಗಳಿಗೆ ಪೊಲೀಸರ ದಾಳಿ, ಇಬ್ಬರ ಬಂಧನ, 23510 ರೂ.ವಶ


 ಮಂಜೇಶ್ವರ:  ಮಂಜೇಶ್ವರದಲ್ಲಿ ಸಮಾನಾಂತರ ಲಾಟರಿ ಕೇಂದ್ರಗಳಿಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕನಿಲ ಬಳಿಯ ರವೀಣ್ ಕುಮಾರ್(42),  ಆಚಾರಿಮೂಲೆಯ ಸಚಿನ್ ಕುಮಾರ್(44) ಬಂಧಿತ ಆರೋಪಿಗಳು. ಇವರ ಕೈಯಿಂದ ಆಟಕ್ಕೆ ಬಳಸಿದ 23510 ರೂ.ಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಎಸ್.ಐ.ಕೆ.ಜಿ.ರಜೀಶ್ ಹಾಗೂ ತಂಡ ನಿನ್ನೆ (ಶುಕ್ರವಾರ) ರಾತ್ರಿ 8 ಗಂಟೆಯ ವೇಳೆ ಹೊಸಂಗಡಿಯ ರಾಜಧಾನಿ ಜುವೆಲ್ಲರಿ  ಸಮೀಪದ ಲಾಟರಿ ಅಂಗಡಿ ಪರಿಸರದಲ್ಲಿ ದಾಳಿ ನಡೆಸಿ ಸಚಿನ್ ಕುಮಾರ್ ನನ್ನು ಬಂಧಿಸಲಾಯಿತು. ಇವರ ಕೈಯಿಂದ 14520 ರೂ ಹಾಗೂ ಸಮಾನಾಂತರ ಲಾಟರಿ ವ್ಯಾಪಾರದ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಯಿತು. ಹೊಸಂಗಡಿ ರೈಲ್ವೇ ಗೇಟು ಬಳಿಯಿಂದ ರವೀಣ್ ಕುಮಾರ್ ಬಂಧಿತನಾಗಿದ್ದು 8990 ರೂ ವಶಪಡಿಸಲಾಗಿದೆ

Post a Comment

0 Comments