Ticker

6/recent/ticker-posts

ಸಮಯಕ್ಕೆ ಸಂಬಂಧಿಸಿ ಖಾಸಗಿ ಬಸ್ಸು ಕಾರ್ಮಿಕರೊಳಗೆ ಜಗಳ; 3 ಕೇಸು ದಾಖಲು


 ಕಾಸರಗೋಡು:  ಸಮಯ ಸಂಬಂಧ ಖಾಸಗಿ ಬಸ್ಸು ಕಾರ್ಮಿಕರು ಪರಸ್ಪರ ನಡೆಸಿದ ಹೊಡೆದಾಟದಲ್ಲಿ  ಪೊಲೀಸರು ಮೂರು ಕೇಸು ದಾಖಲಿಸಿದ್ದಾರೆ. ನಿನ್ನೆ (ಗುರುವಾರ) ಸಾಯಂಕಾಲ ಈ ಘಟನೆ ನಡೆದಿದೆ. ಕಾಸರಗೋಡು- ತಲಪಾಡಿ ರೂಟಿನಲ್ಲಿ ಸಾಗುವ ಎರಡು ಬಸ್ಸು ಸಿಬಂದಿಗಳೊಳಗೆ ಪರಸ್ಪರ  ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ಆರಂಭದಲ್ಲಿ ಚೌಕಿಯಲ್ಲಿ ಪರಸ್ಪರ ಮಾತು ಬೆಳೆದಿದ್ದು ಕಾಸರಗೋಡು ತಲುಪಿದಾಗ ಹೊಡೆದಾಟ ನಡೆದಿದೆ. ಈ ಪ್ರಕರಣದಲ್ಲಿ ಕನ್ನೆಪ್ಪಾಡಿಯ ಅಮೀರ್ ನಿಗೆ ಹಲ್ಲೆಗೈದ ಪ್ರಕರಣದಲ್ಲಿ ಜಿತಿನ್, ರೋಶನ್ ಎಂಬಿವರ ವಿರುದ್ದ ಪೊಲೀಸರು ಕೇಸು ದಾಖಲಿಸಿದರು. ಜಿತಿನ್ ನೀಡಿದ ದೂರಿನಂತೆ ಅಮೀರ್ ಸಹಿತ ಇಬ್ಬರ ವಿರುದ್ದ ಕೇಸು ದಾಖಲಿಸಲಾಗಿದೆ.

   ಅನಂತರ ಕುಂಬಳೆಯಲ್ಲಿ ಬಸ್ಸು ಅಡ್ಡಗಟ್ಟಿ ಹಲ್ಲೆಗೈದ ಪ್ರಕರಣದಲ್ಲಿ ಕಲ್ಲಕಟ್ಟೆಯ ಮುಹಮ್ಮದ್ ಹಾಶಿಂ ನೀಡಿದ ದೂರಿನಂತೆ ರೋಶನ್ ಸಹಿತ 5 ಮಂದಿಯ ವಿರುದ್ದ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ

Post a Comment

0 Comments