Ticker

6/recent/ticker-posts

ಹೋಟೆಲ್ ವೃತ್ತಿಯ ನಡುವೆ ಕುಕ್ ತೀವ್ರ ಅಸೌಖ್ಯದಿಂದ ಮೃತ್ಯು



ಪೆರ್ಲ :  ಹೋಟೇಲ್ ಕಾಯಕದ ನಡುವೆ ಕುಕ್ ಒರ್ವರು ತೀವ್ರ ಅಸೌಖ್ಯಕ್ಕೊಳಗಾಗಿ ಮೃತಪಟ್ಟ ಘಟನೆ ನಡೆದಿದೆ. 

ಏಳ್ಕಾನ ಬಾಳೆಗುಳಿ ನಿವಾಸಿ ದಿ. ಶಿವ ನಾಯ್ಕರ ಪುತ್ರ ಗೋವಿಂದ ನಾಯ್ಕ (51) ಮೃತ ವ್ಯಕ್ತಿ. ಇವರು ಮೈಸೂರು ಸಮೀಪ ಹೋಟೇಲ್ ವೊಂದರಲ್ಲಿ ಅಡುಗೆ ವೃತ್ತಿಗೆಂದು ತೆರಳಿದ್ದು ಕೆಲಸದ ಸ್ಥಳದಲ್ಲಿ ಮೃತಪಟ್ಟ ಬಗ್ಗೆ ಮನೆಯವರಿಗೆ ಇಂದು ಬೆಳಗ್ಗೆ ಮಾಹಿತಿ ಲಭಿಸಿದೆ.

ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಗೋವಿಂದ ನಾಯ್ಕರು ಕಳೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್ ಗೆ ಕಾಂಗ್ರೆಸನ್ನು ಪ್ರತಿನಿಧಿಕರಿಸಿ ಸ್ಪರ್ಧಿಸಿದ್ದರು. ಪ್ರಸ್ತುತ ಎಣ್ಮಕಜೆ ಮಂಡಲ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದಾರೆ. ಏಳ್ಕಾನ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಸ್ಥಾಪಕ ಸದಸ್ಯರಾಗಿ ಬಳಿಕ ಅಧ್ಯಕ್ಷರಾಗಿ, ಇದೀಗ ಸದಸ್ಯರಾಗಿ ಸಕ್ರಿಯರಾಗಿದ್ದರು. ಹವ್ಯಾಸಿ ರಂಗ ಕಲಾವಿದರಾದ ಇವರು ಮರಾಟಿ ಜನಾಂಗದ ಕಲಾರಾಧನೆಯಾದ ಬಾಲೆಸಾಂತು ಕಲಾ ಪ್ರಕಾರವನ್ನು ಪರಂಪರಾಗತವಾಗಿ ಪ್ರದರ್ಶಿಸುವಲ್ಲಿ ಜನಪ್ರಿಯರಾಗಿದ್ದರು. 

ಮೃತರು ತಾಯಿ ಕಮಲ, ಪತ್ನಿ ಕುಮುದ, ಮಕ್ಕಳಾದ ನಿತಿನ್ ,ಹರ್ಷಿತ್,ಸಹೋದರರಾದ ನಿವೃತ್ತ ಬ್ಯಾಂಕ್ ಪ್ರಬಂಧಕ ಕೃಷ್ಣ ನಾಯ್ಕ್,ಹರಿಯ ನಾಯ್ಕ್ ಬಿ.ಎಸ್,ಸಹೋದರಿ ರತ್ನ ಎಂಬವರನ್ನಗಲಿದ್ದಾರೆ. ಇವರ ನಿಧನಕ್ಕೆ ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಮಂಡಲ ಕಾಂಗ್ರೆಸ್ ಸಮಿತಿ, ಶ್ರೀಕೃಷ್ಣ ಸೇವಾ ಸಮಿತಿ ಏಳ್ಕಾನ ಸಂತಾಪ ವ್ಯಕ್ತಪಡಿಸಿದೆ.



Post a Comment

0 Comments