Ticker

6/recent/ticker-posts

ರಕ್ಷಕ- ಶಿಕ್ಷಕ ಸಂಘದ ಸಭೆಗೆಂದು ಮನೆಯಿಂದ ಹೊರಟ ಮಹಿಳೆ ಹಾಗೂ ಮಗು ನಾಪತ್ತೆ


 ಕಾಸರಗೋಡು: ರಕ್ಷಕ- ಶಿಕ್ಷಕ ಸಂಘದ ಸಭೆಗೆಂದು ಮನೆಯಿಂದ ಹೊರಟ ಮಹಿಳೆ ಹಾಗೂ ಮಗು ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಕರಿವೇಡಗಂ ನಿವಾಸಿ ಅರುಣ್ ನಾರಾಯಾಣನ್ ರ ಪತ್ನಿ ಎಂ.ಅನಿಲ(29) ಹಾಗೂ 5 ವರ್ಷದ ಗಂಡು ಮಗು ನಾಪತ್ತೆಯಾಗಿದ್ದಾರೆ. ಪರಿ ಅರುಣ್ ಈ ಬಗ್ಗೆ ಬೇಡಗಂ ಪೊಲೀಸರಿಗೆ ದೂರು ನೀಡಿದ್ದಾರೆ. ಶಾಲೆಯಲ್ಲಿ ರಕ್ಷಕ- ಶಿಕ್ಷಕ ಸಂಘದ ಸಭೆಯಿದೆಯೆಂದು ಶುಕ್ರವಾರ ಬೆಳಗ್ಗೆ 9.30 ಕ್ಕೆ ಅನಿಲ ಮಗನ ಜತೆ ಮನೆಯಿಂದ ಹೊರಟಿದ್ದಳು. ಸಾಯಂಕಾಲವಾದರೂ ಆಕೆ ಹಿಂತಿರುಗಿರಲಿಲ್ಲ. ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿದರೂ  ಪತ್ತೆಯಾಗಲಿಲ್ಲ. ಪಡುಪ್ಪ್ ನಿವಾಸಿ ಅಪ್ಪು ಎಂಬಾತನ ಜತೆ ಆಕೆ ಪರಾರಿಯಾಗಿರಬೇಕೆಂದು ಪತಿ ಅರುಣ್ ಪೊಲೀಸರಲ್ಲಿ ತಿಳಿಸಿದ್ದಾನೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ

Post a Comment

0 Comments