Ticker

6/recent/ticker-posts

ಪೆರಡಾಲ ದೇವಳದ ಸಹಾಯಕ ಅರ್ಚಕರಿಗೆ ಬೀಳ್ಕೊಡುಗೆ ಸಮಾರಂಭ ನಾಳೆ


 

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಬಾಲಸುಬ್ರಹ್ಮಣ್ಯ ಭಟ್ ಮಾತೃಪ್ಪಾಡಿ ಇವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಮಲಬಾರ್ ದೇವಸಂ ಬೋರ್ಡ್ ಇದರ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯದಿಂದ ನಿವೃತರಾದ ಉಮೇಶ್ ಅಟ್ಟೆಗುಳಿ ಇವರಿಗೆ ಗೌರವಾರ್ಪಣೆ ಸಮಾರಂಭ ನಾಳೆ  (ಜೂ.29 ಭಾನುವಾರ) ಬೆಳಗ್ಗೆ 10.30ಕ್ಕೆ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಜರಗಲಿದೆ. ಶ್ರೀ ಉದನೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಐ.ವಿ.ಭಟ್ ಅಧ್ಯಕ್ಷತೆ ವಹಿಸಲಿರುವರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ವಸಂತ ಪೈ ಬದಿಯಡ್ಕ, ಜಯದೇವ ಖಂಡಿಗೆ, ಟಿ.ಕೆ.ನಾರಾಯಣ ಭಟ್,ಚಂದ್ರಹಾಸ ರೈ ಪೆರಡಾಲಗುತ್ತು, ವೆಂಕಟ್ರಮಣ ಭಟ್ ಚಂಬಲ್ತಿಮಾರು, ಸೀತಾರಾಮ ನವಕಾನ, ಕೃಷ್ಣ ಬದಿಯಡ್ಕ, ಜಗನ್ನಾಥ ರೈ ಪೆರಡಾಲಗುತ್ತು ಪಾಲ್ಗೊಳ್ಳಲಿರುವರು.

Post a Comment

0 Comments