ಪೆರ್ಲ : ಪೆರ್ಲದಿಂದ ಪಾಣಾಜೆ ಸಾಗುವ ದಾರಿ ಮಧ್ಯೆ ಸ್ವರ್ಗ ಎಂಬಲ್ಲಿ ಮಳೆಗೆ ವಿದ್ಯುತ್ ಕಂಬ ತುಂಡಾಗಿ ಮುಖ್ಯ ರಸ್ತೆಗೆ ಬಿದ್ದಿದ್ದು ಗಂಟೆಗಳಷ್ಟು ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವುದಾಗಿ ವರದಿಯಾಗಿದೆ.
ಇಂದು ಸಂಜೆ ಸುಮಾರು 4.30 ಗಂಟೆಗೆ ವಿದ್ಯುತ್ ಕಂಬ ಧರಶಾಹಿಯಾಗಿತ್ತು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಉಂಟಾಗಿಲ್ಲ.ತಕ್ಷಣ ವಿದ್ಯುತ್ ವಿಚ್ಛೇದಿಸಲಾಗಿತ್ತು.ತಕ್ಷಣ ಪಂಚಾಯತ್ ಸದಸ್ಯ ರಾಮಚಂದ್ರ ಎಂ ನೇತೃತ್ವದಲ್ಲಿ ರಸ್ತೆ ಸುಗಮಗೊಳಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆದಿತ್ತು. ಕೆಇಬಿ ಅಧಿಕಾರಿಗಳು ಹಾಗೂ ಊರವರು ಸೇರಿ ರಸ್ತೆ ಸಂಚಾರ ಸರಿಪಡಿಸಲು ಸಹಕರಿಸಿದರು. ಇದೀಗ ಓಡಾಟ ಪುನರ್ ಆರಂಭಿಸಲಾಗಿದೆ.
0 Comments