Ticker

6/recent/ticker-posts

ಮಧೂರು ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆಗಾಗಿ ದುಡಿದ ಮೊಗ್ರಾಲ್ ಪುತ್ತೂರು ಪಂಚಾಯತ್ ಪ್ರಾದೇಶಿಕ ಸಮಿತಿಯ ಅಭಿನಂದನಾ ಸಭೆ

 


ಕೊರುವೈಲು: ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ  ಕ್ಷೇತ್ರದ   ಬ್ರಹ್ಮಕಲಶ ಮೂಡಪ್ಪ ಸೇವೆಯ ಅನುಬಂಧವಾಗಿ ರಚನೆಗೊಂಡ ಮೊಗ್ರಾಲ್ ಪುತ್ತೂರು ಪಂಚಾಯತ್ ಪ್ರಾದೇಶಿಕ ಸಮಿತಿಯ ವತಿಯಿಂದ ಕಾರ್ಯಕರ್ತರಿಗಾಗಿ  ಅಭಿನಂದನಾ  ಸಭೆಯು  ಕೊರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಮೊಗ್ರಾಲ್‌ ಪುತ್ತೂರು ಪಂಚಾಯತ್‌  ವ್ಯಾಪ್ತಿಯ ಕಾರ್ಯಕರ್ತರು ಬ್ರಹ್ಮಕಲಶ ಮೂಡಪ್ಪ ಸೇವೆಯ ವೇಳೆ  ಎಲ್ಲಾ ವಿಭಾಗಗಳಲ್ಲೂ ಉತ್ತಮ ಸೇವೆಯನ್ನು ನೀಡಿದ್ದಾರೆ. ಕೇಂದ್ರ ಸಮಿತಿಯ ಎಲ್ಲಾ ಸೂಚನೆಗಳನ್ನೂ ಪಾಲಿಸಿ  ಈ ಐತಿಹಾಸಿಕ ಕಾರ್ಯಕ್ರಮದ ಯಶಸ್ವಿಗೆ ತಮ್ಮದೇ ರೀತಿಯ ಕೊಡುಗೆಯನ್ನು ನೀಡಿದ್ದಾರೆ  ಎಂದು ಪ್ರಶಂಸಿದ ಅತಿಥಿಯಾಗಿ ಭಾಗವಹಿಸಿದ್ದ   ಮೊಗ್ರಾಲ್‌ ಪುತ್ತೂರು ಪಂಚಾಯತ್‌ ಉಸ್ತುವಾರಿ ಶ್ರೀ ಯೋಗೀಶ್‌ ಮಧೂರು ಅವರು   ಸ್ತುತ್ಯರ್ಹ ಸೇವೆ ನೀಡಿದ  ಪಂಚಾಯತ್  ಸಮಿತಿಯ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು  ಅಭಿನಂದನಾರ್ಹರು ಎಂದು ಅವರು ನುಡಿದರು 

ಪಂಚಾಯತ್‌ ವ್ಯಾಪ್ತಿಯಿಂದ  ಆಗಮಿಸಿದ 25ರಷ್ಟು ಘಟಕಗಳ ವರ್ಣರಂಜಿತ ಹೊರೆಕಾಣಿಕೆ ಮೆರವಣಿಗೆಯು ಪ್ರಥಮ ದಿನದಲ್ಲಿಯೇ ಜನಮೆಚ್ಚುಗೆಯನ್ನು ಪಡೆಯಿತು, ಹೊರೆಕಾಣಿಕೆ ವಿಭಾಗದಲ್ಲಿ ಪಂಚಾಯತ್‌ ವ್ಯಾಪ್ತಿಯ ಕಾರ್ಯಕರ್ತರು ಹಗಲಿರುಳ್ಳನ್ನದೇ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಕೇಂದ್ರ ಸಮಿತಿಯ ಹೊರೆಕಾಣಿಕೆವಿಭಾಗದ ಮುಖ್ಯಸ್ಥರಾದ ಶ್ರೀ ರವೀಂದ್ರ ರೈ ಶಿರಿಬಾಗಿಲು ನುಡಿದರು.

ಬ್ರಹ್ಮಕಲಶ ಮೂಡಪ್ಪ ಸೇವೆಯ ವೇಳೆಯಲ್ಲಿ 4 ವೇದಿಕೆಯಲ್ಲಿ ನಡೆದ  ಸಾಂಸ್ಕೃತಿಕ ಯಕ್ಷಗಾನ ಭಜನಾಸೇವೆಗಳಲ್ಲಿ ಪಂಚಾಯತ್‌ ವ್ಯಾಪ್ತಿಯ ಕಾರ್ಯಕರ್ತರು ವಿವಿಧ ಜವಾಬ್ದಾರಿಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವರ ಕೃಪೆಗೆ ಎಲ್ಲರೂ ಪಾತ್ರರಾಗಿದ್ದಾರೆ, ಪಂಚಾಯತ್‌ ಸಮಿತಿಯ ಎಲ್ಲರ ಸೇವೆಯೂ ಕೂಡ ಅಭಿವಂದನೀಯ ಎಂದು  ಸಾಂಸ್ಕೃತಿಕ  ವಿಭಾಗ ಮುಖ್ಯಸ್ಥರಾದ ಶ್ರೀ ಸತ್ಯನಾರಾಯಣ ತಂತ್ರಿಯವರು ನುಡಿದರು.

ಐತಿಹಾಸಿಕ ಬ್ರಹ್ಮಕಲೋತ್ಸವ ಮೂಡಪ್ಪ ಸೇವೆಯ ಯಶಸ್ವಿಗೆ  ಆಗಮಿಸುವ ಬಂಧುಗಳನ್ನು ಸ್ವಾಗತಿಸುವ   ಹಾಗೂ ಎಲ್ಲಾ ವಿಭಾಗಗಳಲ್ಲೂ ಸ್ವಯಂಸೇವಕರಾಗಿ ಸೇವೆ ಸಲ್ಲಿಸುವ ಹೊಣೆಗಾರಿಕೆಯನ್ನು ಪಂಚಾಯತ್‌ ವ್ಯಾಪ್ತಿಯ ಸದಸ್ಯರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪಂಚಾಯತ್‌ ಮಟ್ಟದ ಎಲ್ಲಾ ಕಾರ್ಯಕರ್ತರನ್ನು  ಹಾಗೂ ಸಮಿತಿ ಪದಾಧಿಕಾರಿಗಳನ್ನು ಕೇಂದ್ರ ಸಮಿತಿಯ  ಅಭಿನಂದಿನೆಗೆ ಅರ್ಹರಾಗಿದ್ದಾರೆ ಎಂದು ಸ್ವಾಗತ ಸಮಿತಿ ಮುಖ್ಯಸ್ಥರಾದ ಶ್ರಿ ರಮೇಶ್‌ ಕಾಸರಗೋಡು ನುಡಿದರು.

ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಪ್ರಾದೇಶಿಕ ಸಮಿತಿ ಅಧ್ಯಕ್ಷ ಶ್ರೀ ಪದ್ಮನಾಭನ್‌ ಎರಿಯಾಕೋಟ ವಹಿಸಿ ಮಾತನಾಡಿ ಪಂಚಾಯತ್‌ ಮಟ್ಟದ ಎಲ್ಲ ಕಾರ್ಯಕರ್ತರ ಸಹಕಾರದಿಂದ ಉತ್ತಮ ರೀತಿಯಲ್ಲಿ ಬ್ರಹ್ಮಕಲೋತ್ಸವ ಮೂಡಪ್ಪ ಸೇವೆಯಲ್ಲಿ ಪಂಚಾಯತ್‌ ಮಟ್ಟದಿಂದ ಸೇವೆ ಸಲ್ಲಿಸಲು ಸಾಧ್ಯವಾಯಿತು ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.  

ಪಂಚಾಯತ್‌ ನಿಂದ 2024ಸೆಪ್ಟಂಬರ್‌ ನಿಂದ 2025 ಮೇ ತಿಂಗಳ ತನಕ ಕಚೇರಿ ವಿಭಾಗದಲ್ಲಿ ಸೇವಾ ರೂಪದಲ್ಲಿ ಸೇವೆ ಸಲ್ಲಿಸಿದ ಉಜಿರೆಕೆರೆ ಶ್ರೀ ವಾಸುದೇವ ಕಾರಂತರನ್ನು ಸಭೆಯಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು. ಪಂಚಾಯತ್  ಸಮಿತಿಯ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳನ್ನು  ಅಭನಂದಿಸಲಾಯಿತು. ಬ್ರಹ್ಮಕಲಶದ 30 ಕೌಂಟರ್‌ ಗಳಲ್ಲಿ ಗರಿಷ್ಠ ಸಂಗ್ರಹಿಸಲು ನೇತೃತ್ವ ನೀಡಿದ  ಶ್ರೀ ಕೆ ಜಗದೀಶ್‌ ಆಚಾರ್ಯ ಕಂಬಾರು ಅವರನ್ನು ಅಭಿನಂದಿಸಲಾಯಿತು.  ಪಂಚಾಯತ್  ಸಮಿತಿಯಲ್ಲಿ ಗರಿಷ್ಠ ಸಂಗ್ರಹ ಮಾಡಿದ ತಂಡಗಳಾದ ಬಳ್ಳೂರು, ಕೊರುವೈಲು, ಕಂಬಾರು ತಂಡಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ‌ ಚೌಕಿಯಿಂದ ಉಳಿಯತ್ತಡ್ಕದ ವರೆಗೆ  ರಸ್ತೆಬದಿ ಅಲಂಕಾರಕ್ಕೆ ಸಹಕರಿಸಿದ 14 ಕ್ಲಬ್ ಗಳು, ಹೊರೆಕಾಣಿಕೆ ಸಂಗ್ರಹಸಿದ 25 ವಿವಿಧ ಧಾರ್ಮಿಕ ಶ್ರದ್ದಾ ಕೇಂದ್ರಗಳು, ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದ ನಾಸಿಕ್‌ ಬ್ಯಾಂಡ್ ಡೋಲು ತಂಡಗಳು, ಟ್ಯಾಬ್ಲೊ, ಭಜನೆ , ಕುಣಿತ ಭಜನೆ, ಉಚಿತ ಸೇವೆ ನೀಡಿದ ಧ್ವನಿವರ್ಧಕ ತಂಡ, ಛಾಯಾಗ್ರಾಕರು ಸೇರಿದ ಎಲ್ಲರನ್ನೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ  ಆಗಮಿಸಿದ ಎಲ್ಲರಿಗೂ ಪ್ರಮಾಣಪತ್ರವನ್ನು ಹಾಗೂ ಶ್ರೀದೇವರ ಚಿತ್ರ ಗಳನ್ನು  ನೀಡಲಾಯಿತು. ಉಳಿದವರಿಗೆ ಸಂಬಂಧಪಟ್ಟ ಕ್ಲಬ್‌ ಇಲ್ಲವೇ ಸಂಘ ಸಂಸ್ಥೆಗಳ ಮೂಲಕ  ಪ್ರಮಾಣಪತ್ರವನ್ನು  ವಿತರಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.

 ಸಭೆಯಲ್ಲಿ  ಶ್ರೀ ಗಣೇಶ್‌ ನಾಯಕ್‌ ಬಳ್ಳೂರು, ಶ್ರೀಮತಿ ಪ್ರಮೀಳಾ ಮಜಲ್‌, ಶ್ರೀ ಸಂಪತ್‌ ಪೆರ್ನಡ್ಕ, ಶ್ರೀ ಶಶಿಧರ ಕೆ.ಪಂಡಿತ್‌, ಶ್ರೀ ಕಮಲಾಕ್ಷನ್‌ ಕೆ.ಬಿ,  ಶ್ರೀ ಬಾಬು ಪೂಜಾರಿ ಬಳ್ಳೂರು, ಶ್ರೀ ಬಾಲಕೃಷ್ಣ ಶೆಟ್ಟಿ ಬಳ್ಳೂರು, ಶ್ರೀ ಚಂದ್ರಹಾಸ ಮಜಲ್,  ಶ್ರೀ ಸಂಕಪ್ಪ ಗಟ್ಟಿ ಹರಿಜಾಲ್‌,  ಶ್ರೀ ಸುರೇಂದ್ರ ನಾಯಕ್‌ ಕೊರುವೈಲು, ಶ್ರೀ ಶ್ರೀನಿ ಕೊರುವೈಲು, ಶ್ರೀ ಹರ್ಷವರ್ಧನ ನಾಯಕ್‌  ಕೊರುವೈಲು, ಶ್ರೀ ಕುಞಿಕಣ್ಣ ಮಣಿಯಾಣಿ ಕೆ ಕೆ ಪುರ, ಶ್ರೀ ಸಚಿನ್‌ ಹರಿಜಾಲ್‌, ಶ್ರೀ ಸಂಜೀವ ಪೆರಿಯಡ್ಕ, ಶ್ರೀ ಚಂದ್ರಶೇಖರ್‌ ಬಳ್ಳೂರು, ಶ್ರೀ ಉದಯ ಶಂಕರ್‌ ಕೊರುವೈಲು, ಶ್ರೀಮತಿ ಲಲಿತಾ ಬಿ ನಾಯಕ್‌ ಕೊರುವೈಲು, ಶ್ರೀಮತಿ ಮಲ್ಲಿಕಾ ಕಡಪುರಂ, ಶ್ರೀ ಸುರೇಶ್‌ ಮಜಲ್‌ ಮುಂತಾದವರು ಭಾಗವಹಿಸಿದ್ದರು.

ಪ್ರಾದೇಶಿಕ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ಲೋಕೇಶ್‌ ಎಂ ಬಿ ಆಚಾರ್ ಕಂಬಾರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.  ಶ್ರೀ ವಸಂತ ನಾಯಕ್‌ ಕೊರುವೈಲು ವಂದಿಸಿದರು.

Post a Comment

0 Comments