ಕಾಸರಗೋಡು: ಪಾಡಿ ಶ್ರೀ ಪುಳ್ಳಿಕರಿಂಗಾಳಿ ಭಗವತಿ ಕ್ಷೇತ್ರ ವ್ಯಾಪ್ತಿಯ ಬಾರಿಕ್ಕಾಡು ಪ್ರಾದೇಶಿಕ ಸಮಿತಿಯಲ್ಲಿರುವ ಬಾರಿಕ್ಕಾಡು ಪುದಿಯಪೊರ ಶ್ರೀ ವಿಷ್ಣುಮೂರ್ತಿ ವಯನಾಟ್ಟು ಕುಲವನ್ ತರವಾಡಿನಲ್ಲಿ ತರವಾಡು ಸದಸ್ಯ ಕೃಷ್ಣನ್ ಉದಯಗಿರಿ (ಪಳ್ಳತ್ತಡ್ಕ) ಅವರ ಪ್ರಾರ್ಥನೆಯಂತೆ ಶ್ರೀ ವಯನಾಟ್ಟು ಕುಲವನ್ ತೆಯ್ಯಂಕಟ್ಟು ಮಹೋತ್ಸವವು 2026 ರಲ್ಲಿ ನಡೆಯಲಿದೆ. ಶ್ರೀ ವಯನಾಟ್ಟು ಕುಲವನ್ ತೆಯ್ಯಂಕಟ್ಟು ಮಹೋತ್ಸವದ ಅಗತ್ಯಕ್ಕಾಗಿ ಬೇಕಾದ ಭತ್ತ ಬೆಳೆಯುವುದಕ್ಕಾಗಿ ಭಿತ್ತನೆ ಕಾರ್ಯಕ್ರಮ ನಡೆಯಿತು.
ತರವಾಡಿನಲ್ಲಿ ನಡೆದ ಪ್ರಾರ್ಥನೆಯ ನಂತರ ಬಾರಿಕ್ಕಾಡು ಬಯಲಿನಲ್ಲಿ ಬಿತ್ತನೆ ನಡೆಯಿತು.
ಪಾಡಿ ಶ್ರೀ ಪುಳ್ಳಿಕರಿಂಕಾಳಿ ಭಗವತಿ ಕ್ಷೇತ್ರದ ಆಚಾರ ಸ್ಥಾನಕರು, ಆಡಳಿತ ಸಮಿತಿ ಪದಾಧಿಕಾರಿಗಳು, ಬಾರಿಕ್ಕಾಡು ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು, ಬಾರಿಕ್ಕಾಡು ಶ್ರೀ ಪುದಿಯಪೊರ ತರವಾಡು ಸಮಿತಿ ಸದಸ್ಯರು, ಭಕ್ತಜನರು ಭಾಗವಹಿಸಿದರು.
0 Comments