Ticker

6/recent/ticker-posts

ಅಣಬೆ ಸಂಗ್ರಹಿಸಲು ಕಾಡಿಗೆ ಹೋದ ವ್ಯಕ್ತಿ ಕಾಡಾನೆ ದಾಳಿಯಿಂದ ಮೃತ್ಯು


 ಮಲಪ್ಪುರಂ: ಅಣಬೆ ಸಂಗ್ರಹಿಸಲು ಹೋದ ವ್ಯಕ್ತಿ ಕಾಡಾನೆ ದಾಳಿಯಿಂದ ಮೃತಪಟ್ಟ ಘಟನೆ ನಡೆದಿದೆ. ಮಲಪ್ಪುರಂ ಬಳಿಯ ವಾಣಿಯಂಬಲಂ ನಿವಾಸಿ ವಿಲ್ಲಿ(55) ಮೃತಪಟ್ಟ ಆದಿವಾಸಿಯಾಗಿದ್ದಾರೆ. ನಿನ್ನೆ (ಬುದವಾರ) ಮದ್ಯಾಹ್ನ ಈ ಘಟನೆ ನಡೆದಿದೆ. ಅಣಬೆ ಸಂಗ್ರಹಿಸಲು ಹೋದ ವಿಲ್ಲಿ ಹಿಂತಿರುಗದ ಹಿನ್ನೆಲೆಯಲ್ಲಿ ಹುಡುಕಾಡಿದಾಗ  ಮನೆಯ 200 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಒಂಟಿ ಸಲಗದ ಹಾವಳಿಯಿದೆಯೆಂದು ಸ್ಥಳೀಯರು ದೂರಿದ್ದಾರೆ. ಕಾಡಾನೆ ದಾಳಿಯಿಂದ ಕಳೆದ 6 ತಿಂಗಳಲ್ಲಿ ಈ ಪ್ರದೇಶದಲ್ಲಿ ‌ಸಾವನ್ನಪ್ಪುವ ಮೂರನೇ ವ್ಯಕ್ತಿ ವಿಲ್ಲಿಯಾಗಿದ್ದಾರೆ

Post a Comment

0 Comments