ಕಾಸರಗೋಡು : ವಿದ್ಯಾನಗರ ಕೆಎಸ್ಇಬಿ ಸಬ್ಸ್ಟೇಷನ್ ಬಳಿ ರಸ್ತೆಬದಿಯಲ್ಲಿ ರಾಶಿ ಹಾಕಲಾಗಿದ್ದ ಕೆಎಸ್ಇಬಿಯ 3 ಸಿಎಕ್ಸ್ 300 ಭೂಗತ ಕೇಬಲ್ನ 600 ಮೀಟರ್ಗಳು ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ಸ್ಥಳಗಳಿಗೆ ತರಲಾದ ಕೆ-ಫೋನ್ನ ಆಪ್ಟಿಕಲ್ ಫೈಬರ್ ಕೇಬಲ್ಗಳ 97,000 ಮೀಟರ್ಗಳು ವಿದ್ಯುತ್ ಮಾರ್ಗದಿಂದ ಬಂದ ಕಿಡಿಯಿಂದ ಬೆಂಕಿಗೆ ಆಹುತಿಯಾದವು. ಘಟನೆಯನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಕಾಸರಗೋಡು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ವಿ.ಎನ್. ವೇಣುಗೋಪಾಲ್ ನೇತೃತ್ವದ 2 ಘಟಕಗಳ ವಾಹನಗಳು ಸ್ಥಳಕ್ಕೆ ತಲುಪಿ ಎರಡು ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ.
ಬೆಂಕಿ ಸಂಪೂರ್ಣವಾಗಿ ಆರದ ಕಾರಣ, ಕೇಬಲ್ಗಳನ್ನು ತೆಗೆದು ಜೆಸಿಬಿ ಸಹಾಯದಿಂದ ನೀರು ಸುರಿದು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಗುರುವಾರ ಸಂಜೆ ಈ ಬೆಂಕಿ ಅನಾಹುತ ಸಂಭವಿಸಿದ್ದು ಕೆಎಸ್ಇಬಿಗೆ 10 ಲಕ್ಷ ರೂ. ನಷ್ಟವಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಾಯತ್ರಿ ಮಾಹಿತಿ ನೀಡಿದ್ದಾರೆ. ಕೆ ಫೋನ್ನ ಸುಮಾರು 55 ಲಕ್ಷ ರೂ. ಮೌಲ್ಯದ ಕೇಬಲ್ಗಳು ಬೆಂಕಿಗೆ ಆಹುತಿಯಾಗಿದೆ ಎಂದು ಕೆ ಫೋನ್ ಮೇಲ್ವಿಚಾರಕ ರಾಧಾಕೃಷ್ಣನ್ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ತಂಡದಲ್ಲಿ ಸೇನಾ ಸಿಬ್ಬಂದಿಗಳಾದ ಎಂ. ರಮೇಶ, ಒ.ಕೆ. ಪ್ರಜಿತ್, ವಿ.ಎಸ್. ಗೋಕುಲ್ ಕೃಷ್ಣನ್, ಜಿಜೊ ಜೆ.ಬಿ, ಬಿಬಿಶ್ ಎಂ., ರಮೇಶ್ ಎನ್, ಅನುಶ್ರೀ ಒ.ಕೆ., ಅರುಣಾ ಪಿ. ನಾಯರ್, ಗೃಹರಕ್ಷಕರಾದ ವಿ. ರಾಜು, ಶೈಲೇಶ್ ಎಂ.ಕೆ., ರಂಜಿತ್ ಪಿ., ಶ್ರೀಜಿತ್ ಪಿ. ಕಾರ್ಯಚರಣೆಗೆ ನೇತೃತ್ವ ನೀಡಿದರು.
.jpeg)

0 Comments