ಪೆರ್ಲ : ಚೇರ್ಕಬೆ ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ದೇವರ ಪ್ರತಿಷ್ಠಾ ದಿನ (ಕಳಭ) ಮತ್ತು ಏಕಾಹ ಭಜನಾ ಕಾರ್ಯಕ್ರಮವು ಮೇ 01 ಶುಕ್ರವಾರದಂದು ಜರಗಲಿರುವುದು. ಅಂದು ಪ್ರಾತಃ ಗಂಟೆ 5.45ಕ್ಕೆ ಗಣಪತಿ ಹವನ, ಪ್ರಾರ್ಥನೆ, ಬೆಳಗ್ಗೆ ಗಂಟೆ 6.00ರಿಂದ ಏಕಾಹ ಭಜನೆ ಪ್ರಾರಂಭ, ಗಂಟೆ 11.30ಕ್ಕೆ ಶ್ರೀ ದೇವರಿಗೆ ನವಕಾಭಿಷೇಕ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ 1.00ರಿಂದ ಪ್ರಸಾದ ಭೋಜನ. ಸಾಯಂ. ಗಂಟೆ 6.30ಕ್ಕೆ ಸಹಸ್ರದೀಪ, ದೀಪಾರಾಧನೆ, ರಾತ್ರಿ ಗಂಟೆ 8.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ. ಹಾಗೂ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದೆ.
ಬೆಳಗ್ಗೆ ಗಂಟೆ 6.00 ರಿಂದ 7.30 : ಶ್ರೀ ಶಾರದಾ ಧ್ಯಾನ ಮಂದಿರ, ಕಜಂಪಾಡಿ, 7.30 ರಿಂದ 9.00 : ಶ್ರೀ ವಾಣೀ ಭಜನಾ ಸಂಘ, ಪಡ್ರೆ, 9.00 ರಿಂದ 10.30 : ಶ್ರೀ ಸತ್ಯನಾರಾಯಣ ಭಜನಾ ಸಂಘ, ಪೆರ್ಲ, 10.30 ರಿಂದ 12.00 : ಶ್ರೀ ಅಯ್ಯಪ್ಪ ಭಜನಾ ಸಂಘ, ಉಕ್ಕಿನಡ್ಕ 12.00 ರಿಂದ 1.30 : ಶ್ರೀ ಅನ್ನಪೂರ್ಣಾ ಭಜನಾ ಸಂಘ, ಅಗಲ್ಪಾಡಿ, 1.30 ರಿಂದ 3.00 : ಏಕದಂತ ನೃತ್ಯ ಭಜನಾ ಬಳಗ, ನಲ್ಕ (ನೃತ್ಯಭಜನೆ) 3.00 ರಿಂದ 4.30 : ಶ್ರೀ ವಾಗ್ಗೇವೀ ಭಜನಾ ಸಂಘ, ನಲ್ಕ ,4.30 ರಿಂದ 6.00 : ಐಕ್ಯಂ ಭಜನಾ ತಂಡ ಪೆರ್ಲ, ಸಾಯಂ. ಗಂಟೆ 6.00 ರಿಂದ : ಶ್ರೀ ಚೇರ್ಕಬೆ ಭಕ್ತವೃಂದದಿಂದ ಭಜನಾ ಸೇವೆ ಜರಗಲಿರುವುದು.

0 Comments