ಕಾಸರಗೋಡು : ಅಂಗಳದಲ್ಲಿ ರಾಶಿ ಹಾಕಿದ್ದ ಮರದ ತುಂಡುಗಳ ಕೆಳಗೆ ಬಿದ್ದಿದ್ದ ಆಟಿಕೆಯನ್ನು ಎತ್ತಿಕೊಳ್ಳಲು ಹೋದ ನಾಲ್ಕೂವರೆ ವರ್ಷದ ಬಾಲಕಿಗೆ ನಾಗರಹಾವು ಕಚ್ಚಿದ್ದು ರಾಜ್ಯದಾದ್ಯಂತ ಹಾವಿನ ಕಡಿತಕ್ಕೊಳಗಾದವರ ಸಂಖ್ಯೆ ಹತ್ತು ದಾಟಿದೆ. ಕಾಸರಗೋಡು ಜಿಲ್ಲೆಯ ನೀಲೇಶ್ವರ ಬಳಿಯ ಎಲೆರಿತ್ತಟ್ಟ್ ನಲ್ಲಿ ನಾಲ್ಕೂವರೆ ವರ್ಷದ ಬಾಲಕಿಗೆ ನಾಗರಹಾವು ಕಚ್ಚಿ ಸ್ಥಿತಿ ಗಂಭೀರವಾಗಿದೆ. ಎಲೆರಿತ್ತಟ್ಟ್ ಕುರುವಾಟೆಯ ಶರತ್ ಮತ್ತು ಅಜಿತಾ ದಂಪತಿಯ ಪುತ್ರಿ ರಿತು ಚಂದ್ರ ಹಾವಿನ ಕಡಿತಕ್ಕೊಳಗಾದ ಬಾಲಕಿ. ಮಗು ಪ್ರಸ್ತುತ ಪೆರಿಯಾರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆಟವಾಡುತ್ತಿದ್ದ ಮಗುವಿನ ಆಟಿಕೆ ಅಂಗಳದ ಒಂದು ಭಾಗದಲ್ಲಿ ರಾಶಿ ಹಾಕಿದ್ದ ಮರದ ತುಂಡುಗಳೆಡೆಯಲ್ಲಿ ಬಿದ್ದಿತ್ತು. ಅದನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಹಾವು ಕಚ್ಚಿದೆ ಎಂದು ವರದಿಯಾಗಿದೆ. ಚಿತ್ತಾರಿಕ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಹಾವನ್ನು ಹೊಡೆದು ಸಾಯಿಸಿದ್ದಾಗಿ ತಿಳಿದು ಬಂದಿದೆ.

0 Comments