ಬಂದಡ್ಕ: ಬಂದಡ್ಕ ಜಿ.ಎಚ್.ಎಸ್.ಎಸ್. ಶಾಲೆಯಲ್ಲಿ ಪ್ಲಾಟಿನಂ ಜುಬಿಲಿ ಆಚರಣೆಯ ಅಂಗವಾಗಿ ಪ್ರಥಮ ಎಸ್.ಎಸ್.ಎಲ್.ಸಿ. ಬ್ಯಾಚ್ನ ವಿದ್ಯಾರ್ಥಿಗಳನ್ನು, ಹಿರಿಯ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಾಗೂ ವಿಜಯೋತ್ಸವವನ್ನು ಆಯೋಜಿಸಲಾಗಿತ್ತು. ಎಸ್.ಎಸ್.ಎಲ್.ಸಿ, ಹೈಯರ್ ಸೆಕೆಂಡರಿ, ಎನ್.ಎಮ್.ಎಮ್.ಎಸ್ ಮತ್ತು ಸಿ.ಎಮ್. ಕಿಡ್ಸ್ ಸ್ಕಾಲರ್ಶಿಪ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಗೌರವಾನ್ವಿತ ಉದುಮ ಶಾಸಕರಾದ ಕೆ. ನೀಲಕಂಠನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಪಿ.ಸಿ. (ಸ್ಟೂಡೆಂಟ್ ಪೊಲೀಸ್ ಕ್ಯಾಡೆಟ್) ಗಾರ್ಡ್ ಆಫ್ ಆನರ್ ನೀಡುವ ಮೂಲಕ ಶಾಸಕರನ್ನು ಬರಮಾಡಿಕೊಳ್ಳಲಾಯಿತು.
ಪ್ಲಾಟಿನಂ ಜುಬಿಲಿ ಸಮಿತಿಯ ಅಧ್ಯಕ್ಷರಾದ ಕೆ. ಶೋಭನಕುಮಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕೆ. ಕೆ. ಸೋಯಾ ಮುಖ್ಯ ಅತಿಥಿಯಾಗಿದ್ದರು. ಕುಟ್ಟಿಕೋಲ್ ಗ್ರಾಮ ಪಂಚಾಯತ್ ಸದಸ್ಯರಾದ ಕೆ. ಶೋಭನ ಬಾಲಚಂದ್ರನ್, ಜೋಸ್ ಪಾರತ್ತಟ್ಟೇಲ್, ಮಹೇಶ್ ಗೋಪಾಲ್, ಸೌಮ್ಯಾ ಮೋಹನನ್, ಸಂತೋಷ್ ಅರುಮನ, ಪ್ಲಾಟಿನಂ ಜುಬಿಲಿ ಕಾರ್ಯಾಧ್ಯಕ್ಷ ಸುರೇಶ್ ಪಿ. ವಿ, ಉಪಾಧ್ಯಕ್ಷರಾದ ಬಲರಾಮನ್ ನಂಬಿಯಾರ್, ಕೆ. ಎನ್. ರಾಜನ್, ಪವಿತ್ರನ್ ಸಿ. ನಾಯರ್, ಎಸ್.ಎಂ.ಸಿ. ಅಧ್ಯಕ್ಷ ಶ್ರೀಜಿತ್ ಎಮ್. ಪಿ, ಶಾಲಾ ಮುಖ್ಯೋಪಾಧ್ಯಾಯರಾದ ರಾಘವ ಎಮ್. ಎನ್, ರಾಧಾಕೃಷ್ಣನ್ ನಂಬಿಯಾರ್, ಸುಭಾಷ್ ವನಶ್ರೀ, ಕೃಷ್ಣನ್ ಮೇಲತ್, ಹಿರಿಯ ಶಿಕ್ಷಕ ಪಿ. ಎನ್. ಸುಬ್ರಹ್ಮಣ್ಯ ಭಟ್, ಪ್ರಥಮ ಎಸ್.ಎಸ್.ಎಲ್.ಸಿ. ಬ್ಯಾಚ್ನ ವಿದ್ಯಾರ್ಥಿಗಳಾಗಿದ್ದ ಮೋನಪ್ಪ ಗೌಡ, ಮಣಿಯಪ್ಪನ್ ಕೆ. ಎನ್, ಪ್ಲಸ್ ಟು ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ರಸ್ಯಾಲಕ್ಷ್ಮಿ ಹಾಗೂ ಜಾನ್ ಕೆ. ಎ. ಅವರು ಮಾತನಾಡಿದರು. ಪ್ರಾಂಶುಪಾಲರಾದ ರೇಖಾ ದಾಸ್ ಕೆ. ಪಿ. ಸ್ವಾಗತಿಸಿ, ಸ್ಟಾಫ್ ಸೆಕ್ರೆಟರಿ ಜ್ಯೋತಿಲಕ್ಷ್ಮಿ ಕೆ. ವಂದಿಸಿದರು.

.jpeg)
0 Comments