ಬದಿಯಡ್ಕ: ಯುಡಿಎಫ್ ಸರಕಾರವು ಘೋಷಿಸಿದ ಇಂದಿರಾ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಬಗ್ಗೆ ಸಂಭ್ರಮ ವ್ಯಕ್ತಪಡಿಸಿ ಯುಡಿಎಫ್ ವತಿಯಿಂದ ಬದಿಯಡ್ಕದಲ್ಲಿ ಕಾಸರಗೋಡು - ಬದಿಯಡ್ಕ - ಪುತ್ತೂರು ರೂಟಿನ ಬಸ್ಗೆ ಉಜ್ವಲ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಹಲವಾರು ಮಹಿಳೆಯರು ಉಚಿತ ಬಸ್ ಪ್ರಯಾಣದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಯುಡಿಎಫ್ ವತಿಯಿಂದ ನೀಡಿದ ಸ್ವಾಗತದಲ್ಲಿ ಯುಡಿಎಫ್ ಪಂಚಾಯತ್ ಸಮಿತಿ ಅಧ್ಯಕ್ಷ ಅನ್ವರ್ ಓಜೋನ್, ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಗಂಗಾಧರ ಗೋಳಿಯಡ್ಕ, ಪಿ. ಜಗನ್ನಾಥ ರೈ, ಅಶ್ವತಿ, ಲೀಲಾವತಿ, ರಂಜಿನಿ ಮೊದಲಾದವರು ಉಪಸ್ಥಿತರಿದ್ದರು.

0 Comments