ಮಲಪ್ಪುರ : ಮಿಕ್ಸ್ಚರ್ನಲ್ಲಿದ್ದ ಕಡಲೆ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿದ ಪರಿಣಾಮ ಮೂರು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಕುನ್ನುಂಪುರಂ ಚೆಂಗಾನಿ ನಿವಾಸಿ ಮುನೀರ್ ಅವರ ಪುತ್ರ ಮೊಹಮ್ಮದ್ ರಿಜಾನ್ (3) ಎಂದು ಗುರುತಿಸಲಾಗಿದೆ. ಮಿಕ್ಸ್ಚರ್ ತಿನ್ನುತ್ತಿದ್ದ ವೇಳೆ ಕಡಲೆ ಬಾಲಕನ ಗಂಟಲಲ್ಲಿ ಸಿಲುಕಿದ್ದು, ಉಸಿರಾಟದ ತೊಂದರೆ ಉಂಟಾಯಿತು. ಕೂಡಲೇ ಕುಟುಂಬದವರು ಸಮೀಪದ ಕುನ್ನುಂಪುರಂ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

0 Comments