ತ್ರಿಶೂರ್: ಡಿವೈಎಫ್ ಐ ರಾಜ್ಯ ಸಮ್ಮೇಳನದ ಅಂಗವಾಗಿ ಪ್ರದರ್ಶಿಸಲಾದ 'ಮಿಸಾ' ನಾಟಕದ ನಾಟಕದ ಒಂದು ಭಾಗವನ್ನು ಮಾತ್ರ ಕತ್ತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಈ ಬಗ್ಗೆ ಸ್ವತಃ ಅದರ ನಟಿಯೇ ಪ್ರತಿಕ್ರಿಯಿಸಿದ್ದು
ನಾಟಕವನ್ನು ತಪ್ಪು ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಈ ಅಪಪ್ರಚಾರಕ್ಕೆ ರಂಗ ಕಲಾವಿದೆ ಚಿನ್ನೂಸ್ ಕೆಲಂಕ ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.
ತುರ್ತು ಪರಿಸ್ಥಿತಿಯಿಂದ ಆರಂಭಿಸಿ ಫ್ಯಾಸಿಸಂ ಹಾಗೂ ಆಡಳಿತ ವ್ಯವಸ್ಥೆಯ ದೌರ್ಜನ್ಯಗಳ ಕುರಿತು ಪರಿಣಾಮಕಾರಿ ಸನ್ನಿವೇಶಗಳನ್ನು ಪ್ರದರ್ಶಿಸಲಾಗಿದೆ.
ಆಡಳಿತ ವ್ಯವಸ್ಥೆಯ ದೌರ್ಜನ್ಯ ಮತ್ತು ಭಯೋತ್ಪಾದನೆಯ ಕುರಿತು ಈ ನಾಟಕ ಮಾತನಾಡುತ್ತದೆ. ಯಾರು ಎಷ್ಟೇ ಕೆಣಕಿದರೂ ನಾಟಕವನ್ನು ಇನ್ನಷ್ಟು ಬಲವಾಗಿ ಮು೦ದುವರಿಸುತ್ತೇವೆ ಎ೦ದು ಚಿನ್ನೂಸ್ ಕೆಲಂಕ ಹೇಳಿದ್ದಾರೆ.
"ಮಿಸಾ ಯಾರನ್ನು ನೋಯಿಸಬೇಕಿತ್ತೋ, ನಾಟಕ ಯಾರನ್ನು ಕಳವಳಗೊಳಿಸಬೇಕಿತ್ತೋ, ಅವರಿಗೆ ಅದು ಸರಿಯಾಗಿಯೇ ತಟ್ಟಿದೆ ಎಂಬುದು ನಡೆಯುತ್ತಿರುವ ಅಪಪ್ರಚಾರದಿಂದ ಸ್ಪಷ್ಟವಾಗಿದೆ" ಎಂದು ಅವರು ಹೇಳಿದ್ದಾರೆ.

0 Comments