ತಲಪಾಡಿ : ದೇವಸ್ಥಾನ ರಸ್ತೆ ನಿವಾಸಿ ದಿ.ನಾರಾಯಣ ಪೂಜಾರಿಯವರ ಪುತ್ರ ತಲಪಾಡಿಯಲ್ಲಿ ಲಾಟರಿ ವಿತರಕರಾಗಿದ್ದ ಬಾಲಕೃಷ್ಣ ಪೂಜಾರಿ (ಬಾಲಣ್ಣ) (63) ಹೃದಯಾಘಾತ ನಿಧನರಾದರು. ತಲಪಾಡಿ ಶ್ರೀರಾಮ ಭಜನಾ ಮಂದಿರದ ಸದಸ್ಯರಾಗಿದ್ದ ಬಾಲಣ್ಣ ಈ ಪ್ರದೇಶದಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ವಾರಿಜ, ಏಕೈಕ ಪುತ್ರ ಮುಕುಂದರಾಜ್ ಹಾಗೂ ಅಪಾರ ಬಂಧುಬಳಗವನ್ನಗಲಿದ್ದಾರೆ. ಇವರ ನಿಧನಕ್ಕೆ ಲಾಟರಿ ಮಾರಾಟ ಹಾಗೂ ಮಾಲೀಕರ ಸಂಘದ ಬಿಎಂಎಸ್ ಘಟಕ ಸಂತಾಪ ವ್ಯಕ್ತಪಡಿಸಿದೆ.

0 Comments