ಕಾಸರಗೋಡು : ‘ಕ್ರೀಡೆಯೊಂದಿಗೆ ನಿಲ್ಲಿ, ಮಾದಕವಸ್ತುಗಳನ್ನು ದೂರವಿಡಿ’ (Yes to Sports, No to Drugs) ಎಂಬ ಘೋಷಣೆಯೊಂದಿಗೆ ಕೇರಳ ಪೊಲೀಸ್ ಅಥ್ಲೆಟಿಕ್ ಮೀಟ್ 2026ರ ಅಂಗವಾಗಿ ಆಯೋಜಿಸಿರುವ ರಾಜ್ಯಮಟ್ಟದ ಮಾದಕವಿರೋಧಿ ಮ್ಯಾರಥಾನ್ ಹಾಗೂ ದೀಪಶಿಖಾ ಯಾತ್ರೆ ಸೆಪ್ಟೆಂಬರ್ 5ರಂದು ಕಾಸರಗೋಡು ಹೊಸ ಬಸ್ ನಿಲ್ದಾಣದ ಪರಿಸರದಲ್ಲಿ ಆರಂಭಗೊಂಡಿತು.
ಬೆಳಗ್ಗೆ 7 ಗಂಟೆಗೆ ಆರಂಭವಾದ ಈ ಜನಜಾಗೃತಿ ಅಭಿಯಾನ ಸೆಪ್ಟೆಂಬರ್ 8ರವರೆಗೆ ಕಾಸರಗೋಡಿನಿಂದ ತಿರುವನಂತಪುರದವರೆಗೆ ನಡೆಯಲಿದೆ. ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ನಗರಸಭಾ ಅಧ್ಯಕ್ಷರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು.
ಕಾಸರಗೋಡು ಎಎಸ್ಪಿ ಅಚ್ಯುತ್ ಅಶೋಕ್ ಐಪಿಎಸ್ ಮಾದಕವಿರೋಧಿ ಪ್ರತಿಜ್ಞೆ ಬೋಧಿಸಿದರು. ಬಳಿಕ ‘ತೂಫಾನ್’ ಮಾದಕವಿರೋಧಿ ಪ್ರಚಾರ ವಾಹನವನ್ನು ಜಿಲ್ಲಾಧಿಕಾರಿ ಕೆ. ಅರ್ಜುನ್ ಪಾಂಡ್ಯನ್ ಐಎಎಸ್ ಅನಾವರಣಗೊಳಿಸಿದರು. ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಜಗದೀಶ್ ಕುಂಬಳೆ ಹಾಗೂ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಮೊಹಮ್ಮದ್ ರಾಫಿ ಅವರಿಂದ ಆರ್ಆರ್ಆರ್ಎಫ್ ಕಮಾಂಡೆಂಟ್ ಶಕ್ತಿ ಸಿಂಗ್ ಆರ್ಯ ಐಪಿಎಸ್ ದೀಪಶಿಖೆ ಸ್ವೀಕರಿಸಿದರು.
ಬಳಿಕ ಜನಪ್ರತಿನಿಧಿಗಳು ಹಾಗೂ ಗಣ್ಯರು ಮ್ಯಾರಥಾನ್ಗೆ ಚಾಲನೆ ನೀಡಿದರು. ಪುಲಿಕುನ್ನು ಮುನ್ಸಿಪಲ್ ಕಾನ್ಫರೆನ್ಸ್ ಹಾಲ್ನಲ್ಲಿ ಎನ್ಎಸ್ಎಸ್, ಎನ್ಸಿಸಿ ಹಾಗೂ ಎಸ್ಪಿಸಿ ಕೆಡೆಟ್ಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂವಾದ ನಡೆಸಿದರು. ಡಿವೈಎಸ್ಪಿ ಡಾ. ವಿ. ಬಾಲಕೃಷ್ಣನ್ ಮಾದಕವಿರೋಧಿ ಜಾಗೃತಿ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.
ಸಂಜೆ 3 ಗಂಟೆಗೆ ಕಾಸರಗೋಡು ಡಿಎಚ್ಕ್ಯೂ ಪೊಲೀಸ್ ಟರ್ಫ್ನಲ್ಲಿ ಎಂಟು ತಂಡಗಳ ಭಾಗವಹಿಸುವಿಕೆಯೊಂದಿಗೆ ‘ತೂಫಾನ್ ಕಿಕ್’ ಕ್ರೀಡಾ ಕಾರ್ನಿವಲ್ ಕೂಡ ನಡೆಯಲಿದೆ.
.jpeg)


0 Comments