ಬದಿಯಡ್ಕ: ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನದ ಅಂಗವಾಗಿ ಬದಿಯಡ್ಕ ಕಿನ್ನಿಮಾಣಿ ದೇವಸ್ಥಾನದ ಸಮೀಪ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಕಾಸರಗೋಡು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಧರ್ಮಪ್ರಚಾರಕ ಸುರೇಶ್ ಶೆಟ್ಟಿ ಪರಂಕಿಲ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಖಜಾಂಜಿ ಹರೀಶ್ ರೈ ಪುತ್ರಕಳ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವಾಹಕ ಸ್ವರಾಜ್, ವಿಹಿಂಪ ಬದಿಯಡ್ಕ ಪ್ರಖಂಡ ಪ್ರಧಾನ ಕಾರ್ಯದರ್ಶಿ ಸುನಿಲ್ ಕಿನ್ನಿಮಾಣಿ, ಭಜರಂಗದಳ ಸಂಯೋಜಕ ರೂಪೇಶ್ ಶೆಟ್ಟಿ, ವಿಹಿಂಪ ಬದಿಯಡ್ಕ ಪಂಚಾಯತ್ ಸಮಿತಿ ಅಧ್ಯಕ್ಷ ಇಂದುಶೇಖರ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕಿನ್ನಿಮಾಣಿ, ಕಾರ್ಯದರ್ಶಿ ಸಂತೋಷ್ ಕುಮಾರ್ ಬರ್ಲ, ಪಂಚಾಯತ್ ಸದಸ್ಯ ಅವಿನಾಶ್ ರೈ, ದಾಮೋದರ ಚೆಟ್ಟಿಯಾರ್, ರಂಜಿತ್ ಮೂಕಂಪಾರ, ಪ್ರತೀಕ್ ಆಳ್ವ ಪೆರಡಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

0 Comments