ಮಧೂರು : ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವದ, ಕೊನೆಯ ದಿನವಾದ ಆರಾಟ್ ಮಹೋತ್ಸವದಂದು ಮನ್ನಿಪಾಡಿಯ ಅಲಂಗೋಡು ಶ್ರೀ ಧೂಮಾವತಿ ನೃತ್ಯ ತಂಡದವರಿಂದ ಫ್ಯೂಷನ್ ತಿರುವಾದಿರ"ವು ನೆರೆದಿರುವ ಭಕ್ತ ಜನಸ್ತೋಮರ ಗಮನ ಸೆಳೆಯಿತು.
ಓಮನ ರವಿ, ಪೂರ್ಣಿಮಾ ರಾಜೇಶ್, ಕುಮಾರಿ ಅನುಶ್ರೀ, ಶೀಬಾ ಸತೀಶ್, ಲತಾ ವಸಂತ, ವಿನಿತಾ ರಾವ್, ಅಶ್ವಿನಿ ಶರತ್, ಡಾ. ಚೈತ್ರ ರವಿ, ಡಾ. ಮೃದುಲ ರಾಘವನ್, ಕು.ಧನಶ್ರೀ, ಕು.ರಮ್ಯ , ಅಮಿತಾ ಶರತ್, ಸೌಮ್ಯ ಸುನೀಶ್, ಪ್ರಶಾಂತಿ ದೇವದಾಸ್ ಮುಂತಾದವರು, ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕನ ದಿವ್ಯ ಸನ್ನಿಧಿಯಲ್ಲಿ " ತಿರುವಾದಿರಕ್ಕೆ ಹೆಜ್ಜೆ ಹಾಕಿ ಜನಮನ ಸೂರೆಗೊಂಡರು. ಉದಯಕುಮಾರ್ ಮನ್ನಿ ಪಾಡಿ,ನಾರಾಯಣ ಬೋವಿಕಾನ, ವಸಂತ ಕಾಂತಿಕೆರೆ ಮುಂತಾದ ಗಣ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು. ದೇವಸ್ಥಾನದ ಸಮಿತಿ ಸದಸ್ಯರು ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
0 Comments