Ticker

6/recent/ticker-posts

ವಿಷ್ಣುಮೂರ್ತಿ ಕೆಂಡಸೇವೆಯ ಮೇಲೇರಿಯ ಮೇಲೆ ಮೂಡಿ ಬಂದ ದೈವದ ಪ್ರತಿರೂಪ


 ಪೆರ್ಲರವಿವಾರ ರಾತ್ರಿ ಮುಂಡಿತ್ತಡ್ಕದಲ್ಲಿ ನಡೆದ ವಿಷ್ಣುಮೂರ್ತಿ ಕೆಂಡಸೇವೆಯ ಮೇಲೇರಿಯ ಮೇಲೆ ಮೂಡಿ ಬಂದ ಸಾಕ್ಷತ್ ಮಹಾವಿಷ್ಣು ದೈವದ ಅಭಯರೂಪ ಭಕ್ತರನ್ನು ಮೂಕ ವಿಸ್ಮಿತಗೊಳಿಸಿದೆ. ಕಳೆದ ಅರ್ಧ ಶತಮಾನದಷ್ಟು ಇತಿಹಾಸ ಇರುವ ಇಲ್ಲಿನ. ಕಾರಣೀಕ ದೈವ ವಿಷ್ಣುಮೂರ್ತಿಯ ಆರಾಧನೆ ಈ ಮಣ್ಣಿನಲ್ಲಿ ವಿವಿಧ ರೀತಿಯಲ್ಲಿ ಜರಗುತ್ತಾ ಬರುತ್ತಿದೆ.ಇದರಲ್ಲಿ ಪ್ರಮುಖವಾದುದೇ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಕೆಂಡಸೇವಾ ಮಹೋತ್ಸವ.


ಇಲ್ಲಿನ ಭಕ್ತ ಜನತೆ ಅತ್ಯಂತ ಭಕ್ತಿ ಪ್ರಧಾನವಾಗಿ ಕೊಂಡಾಡುವ ಈ ಒತ್ತೆಕೋಲ ಮಹೋತ್ಸವದಲ್ಲಿ ಕೆಂಡ ಸೇವೆಯು ವಿಷ್ಣುಮೂರ್ತಿ ದೈವಕ್ಕೆ ಅತ್ಯಾಪ್ತವಾದ ಸೇವೆಯಾಗಿದೆ. ಇದಕ್ಕಾಗಿ ಕೋಲದ ಸಾಕಷ್ಟು ಮುಂಚಿತವಾಗಿಯೇ ಭಕ್ತರು ಹರಕೆ ರೂಪದಲ್ಲಿ ತಮ್ಮ‌ಇಷ್ಟಾರ್ಥ ಸಿದ್ಧಿಗಾಗಿ ಈ ಸೇವೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆಯಾಗಿದೆ. 

ಇದೀಗ ನಿನ್ನೆ ನಡೆದ ಕೆಂಡ ಸೇವೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೈವದ ಅಭಯ ಪವಾಡವೊಂದು ಗೋಚರಿಸಿದ್ದು ಬದಿಯಡ್ಕದ ಯುವ ಛಾಯಾಗ್ರಾಹಕ ಇಂದುಶೇಖರ್ ಆಚಾರ್ಯ ಅವರ ಕ್ಯಾಮರದಲ್ಲಿ ಈ ವಿಸ್ಮಯಕಾರಿ ಪ್ರತಿರೂಪ ಸೆರೆಯಾಗಿದ್ದು ಎಲ್ಲಡೆ ವೈರಲ್ ಆಗುತ್ತಿದೆ.

Post a Comment

0 Comments