Ticker

6/recent/ticker-posts

ಕಾಶ್ಮೀರ ಹುತಾತ್ಮರಿಗೆ ನುಡಿ ನಮನ ಹಾಗೂ ವಿರಾಟ್ ಹಿಂದೂ ಜನಜಾಗೃತಿ ಸಮಾವೇಶ ಮೇ.4 ಆದಿತ್ಯವಾರದಂದು ಉಪ್ಪಳ ಐಲ ಮೈದಾನದಲ್ಲಿ


 ಉಪ್ಪಳ: ಕಾಶ್ಮೀರ ಹುತಾತ್ಮರಿಗೆ ನುಡಿ ನಮನ ಹಾಗೂ ವಿರಾಟ್ ಹಿಂದೂ ಜನಜಾಗೃತಿ ಸಮಾವೇಶ ಮೇ.4  ಆದಿತ್ಯವಾರದಂದು ಉಪ್ಪಳ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಐಲ ಮೈದಾನದಲ್ಲಿ ಜರಗಲಿರುವುದು.

ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಮ್ ಎಡನೀರು ಮಠ ಹಾಗೂ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠ ಇದರ ಸಂಯುಕ್ತ ಆಶ್ರಯದಲ್ಲಿ  ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಮಾವೇಶದಲ್ಲಿ ದಿಕ್ಕೂಚಿ ಭಾಷಣ(ಮಲಯಾಳ)ವನ್ನು ನಿಖಟಪೂರ್ವ ರಂಗಾಯಣ ನಿರ್ದೇಶಕ, ರಾಷ್ಟ್ರೀಯವಾದಿ ನಾಟಕಕಾರ ಅಡ್ಡಂಡ ಕಾರ್ಯಪ್ಪ ಅವರು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರು ವಹಿಸಲಿದ್ದಾರೆ.ದಿಕ್ಕೂಚಿ ಭಾಷಣ (ಕನ್ನಡ)ವನ್ನು ಜಿಜೇಶ್ ಪಟೇರಿ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಕೇರಳ ತಮಿಳುನಾಡು ಇವರು ನೆರವೇರಿಸಲಿದ್ದಾರೆ.

ವಿರಾಟ್ ಹಿಂದೂ ಜಾಗೃತಿ ಸಮಾವೇಶದಲ್ಲಿ ಸರ್ವ ಹಿ೦ದೂ ಭಾ೦ದವರು ಭಾಗವಹಿಸಿ ಯಶಸ್ವಿಗೆ ಸಕರಿಸಬೇಕಾಗಿ ವಿನಂತಿಯನ್ನು ಮಾಡಲಾಗಿದೆ.

Post a Comment

0 Comments