ಪೆರ್ಲ : ಪೇಟೆಯಿಂದ ಕಾಟುಕುಕ್ಕೆ ದೇವಸ್ಥಾನಕ್ಕೆ ತೆರಳುವ ಕೆ.ಕೆ.ರೋಡ್ ರಸ್ತೆ ತೀರಾ ಹದಗೆಟ್ಟಿದೆ ಹಲವು ಸಲ ಇದರ ಅಭಿವೃದ್ಧಿ ಕಾಮಗಾರಿ ಅಪೇಕ್ಷಿಸಿ ಸಲ್ಲಿಸಿದ ಬೇಡಿಕೆಯನ್ನು ಸಂಬಂಧಪಟ್ಟವರು ಕಡೆಗಣಿಸಿ ಕುಳಿತುಕೊಂಡಿದೆ.
ಪಂಚಾಯಿತಿನಿಂದ ಪಿಡಬ್ಲುಡಿಗೆ ಹಸ್ತಾಂತರಗೊಂಡ ಈ ರಸ್ತೆ ಅಭಿವೃದ್ಧಿಗೆ ಸ್ವತಃ ಸರಕಾರಿ ಇಲಾಖೆಯೇ ಗಮನ ಹರಿಸಬೇಕಾಗಿದ್ದು ಅಸಾಧ್ಯವಾದರೆ ರಸ್ತೆಯನ್ನು ಪಂಚಾಯತ್ ಗೆ ಬಿಟ್ಟು ಕೊಡಲಿ ರಸ್ತೆಯ ಅಭಿವೃದ್ಧಿಯನ್ನು ಪಂಚಾಯತ್ ಕೈಗೆತ್ತಿಗೊಳ್ಳಲಿದೆ ಎಂದು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಲೋಕೋಪಯೋಗಿ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳಿದೆಲ್ಲೆಡೆಯ ರಸ್ತೆ ಸಹಿತ ಮೂಲಭೂತ ಕೆಲಸ ಕಾರ್ಯಗಳು ಅಭಿವೃದ್ಧಿ ಕಾಣುತ್ತಿರುವ ನಡುವೆ ಕೆ.ಕೆ.ರಸ್ತೆ ಅಭಿವೃದ್ಧಿಗೆ ಪಂಚಾಯತ್ ಹಾಗೂ ಶಾಸಕರ ನೇತೃತ್ವದಲ್ಲಿ ಸರಕಾರಕ್ಕೆ ಮನವಿ ನೀಡಲಾಗಿತ್ತು. ಆದರೆ ಈ ಎಲ್ಲಾ ಬೇಡಿಕೆಗಳನ್ನು ಸಂಬಂಧಪಟ್ಟವರು ನಿರ್ಲಕ್ಷಿಸಿ ತೋರುವ ನಿಲುವು ಅಕ್ಷೇಪಾರ್ಹವಾಗಿದೆ. ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗದಿದ್ದರೆ ಹೋರಾಟಕ್ಕೆ ನೇತೃತ್ವ ನೀಡಲಾಗುವುದು ಎಂದು ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್ .ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments