ಮಂಜೇಶ್ವರ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮಂಜೇಶ್ವರ ತಾಲೂಕು ಇವರ ನೇತೃತ್ವದಲ್ಲಿ ತಲಪಾಡಿ ವಲಯ ಮಟ್ಟದ ಭಜನೋತ್ಸವ ಕಾರ್ಯಕ್ರಮವು ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯಾಲಯ ಪ್ರೇರಣಾ ಮಂಜೇಶ್ವರದಲ್ಲಿ ನಡೆಯಿತು.ಕುಳಿತು ಹಾಡುವ ಮತ್ತು ಕುಣಿತ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಶ್ರೀ ದಿನೇಶ್ ಚೆರುಗೋಳಿ ವಹಿಸಿದ್ದರು.ವಲಯಾಧ್ಯಕ್ಷರಾದ ಶ್ರೀ ಸಂಜೀವ ಶೆಟ್ಟಿ ಮಾಡ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಡಾ. ಶ್ರೀ ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಜಿಲ್ಲಾ ಭಜನಾ ಪರಿಷತ್ ಸಮನ್ವಯಾಧಿಕಾರಿಗಳಾದ ಶ್ರೀ ಸಂತೋಷ್ ಪಿ ಅಳಿಯೂರು, ಉದ್ಯಮಿಗಳಾದ ಶ್ರೀ ಮೋಹನ್ ಶೆಟ್ಟಿ,ತಾಲೂಕು ಪರಿಷತ್ ಕಾರ್ಯದರ್ಶಿಗಳಾದ ಶ್ರೀ ರಾಮಕೃಷ್ಣ ಸಂತಡ್ಕ,ಹಿರಿಯ ಭಜಕರಾದ ಆನಂದ ತಚ್ಚಿರೆ ಉಪಸ್ಥಿತರಿದ್ದರು. ವಲಯ ಕಾರ್ಯದರ್ಶಿ ಶ್ರೀಮತಿ ಶಿಲ್ಪಾ, ಶ್ರೀಮತಿ ಜ್ಯೋತಿ, ಶ್ರೀಮತಿ ಆಶಾ ಹಾಗೂ ಭಜನಾ ಮಂಡಳಿಗಳ ಸದಸ್ಯರು,ಪರಿಷತ್ ಪದಾಧಿಕಾರಿಗಳು,ವಿದ್ಯಾರ್ಥಿ ಪೋಷಕರೂ ಭಾಗವಹಿಸಿದ್ದರು.
0 Comments