ನವದೆಹಲಿ: ಪಹಲ್ಗಾಂ ಭಯೋತ್ಪಾದಕ ದಾಳಿಯ ಮುಖ್ಯ ಆರೋಪಿ ಸಹಿತ ಮೂರು ಮಂದಿ ಭಯೋತ್ಪಾದಕರನ್ನು ಸೇನೆ ಹತ್ಯೆಗೈದಿದೆ. ಇಂದು (ಗುರುವಾರ) ಬೆಳಗ್ಗೆ ಆವಂತಿಪುರ ಥ್ರಾಸ್ ವಲಯದಲ್ಲಿ ನಡೆದ ದಾಳಿಯಲ್ಲಿ ಮೂರು ಮಂದಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಪಹಲ್ಗಾಂ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರಧಾರ ಆಸಿಫ್ ಶೇಖ್ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಈತ ಜಮ್ಮು ಕಾಶ್ಮೀರದ ಥ್ರಾಸ್ ವಲಯದ ನಿವಾಸಿಯಾಗಿದ್ದಾನೆ. ಪಹಲ್ಗಾಂ ದಾಳಿಯ ಯೋಜನೆ ಈತನದ್ದಾಗಿದೆ ಎಂದೂ ತಿಳಿದು ಬಂದಿದೆ.
ಪಹಲ್ಗಾಂ ಭಯೋತ್ಪಾದಕರಿಗೆ ವಸತಿ, ಊಟ ಸಹಿತ ಎಲ್ಲ ಸೌಕರ್ಯಗಳನ್ನು ಈತ ಒದಗಿಸಿದ್ದನು.
0 Comments