ಪೆರ್ಲ : ಸೇರಾಜೆ ಮದನ ಮಾಸ್ಟರ್ ಸ್ಮಾರಕ ಸಾರ್ವಜನಿಕ ಗ್ರಂಥಾಲಯ ಕುರೆಡ್ಕದ ವತಿಯಿಂದ ಪ್ಲಸ್ ಟು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗ್ರಂಥಾಲಯ ಪರಿಸರದ ಪ್ರತಿಭೆಗಳಿಗೆ ಅಭಿನಂದನೆ ಮತ್ತು ಗ್ರಂಥಾಲಯ
ಫಲಾನುಭವಿಗಳಾದ ಮಕ್ಕಳಿಗೆ ಉಚಿತ ಕಲಿಕೋಪಕರಣದ ಅಂಗವಾಗಿ ಬ್ಯಾಗ್ ವಿತರಿಸಲಾಯಿತು.
ಎಣ್ಮಕಜೆ ಗ್ರಾ.ಪಂ.ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಭಿ ಹನೀಫ್ ಉದ್ಘಾಟಿಸಿದರು.ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಂಥಾಲಯದ ಪದಾಧಿಕಾರಿಗಳಾದ ನಾರಾಯಣ ,ರಾಮಕೃಷ್ಣ ರೈ,ಚಂದ್ರಾವತಿ ಸ್ವರ್ಗ,ಸಲಾಂ ಮಾಸ್ತರ್, ಮೊಹಮ್ಮದ್ ಹನೀಫ್ ನಡುಬೈಲು, ಗ್ರಂಥಪಾಲಕಿ ಶಾರದ ಮೊದಲಾದವರು ಭಾಗವಹಿಸಿದ್ದರು.
0 Comments