Ticker

6/recent/ticker-posts

Ad Code

ಮುಂಗಾರು ಮುಂಚಿತವಾಗಿ ರಾಜ್ಯದಲ್ಲಿ ಬಿರುಸಿನ ಮಳೆ, ನಾಳೆ ಕಾಸರಗೋಡು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್


 ತಿರುವನಂತಪುರಂ; ಮುಂಗಾರು ಮಳೆಯ ಮುಂಚಿತ ಎಂಬಂತೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ‌ಬಿರುಸಿನ‌‌ ಮಳೆ ಬರಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿದೆ. ನಾಳೆ (ಸೋಮವಾರ)  ಕಾಸರಗೋಡು ಸಹಿತ ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು,  ಕಣ್ಣೂರು, ವಯನಾಡು, ಕೋಜಿಕ್ಕೋಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಆಗಿದೆ. ಆಲಪುಯ, ಕೊಟ್ಟಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ನಾಳೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ

ಕಾಸರಗೋಡು ಜಿಲ್ಲೆಯಲ್ಲಿ ಇಂದು (ಆದಿತ್ಯವಾರ) ಎಲ್ಲೋ ಅಲರ್ಟ್ ಆಗಿದೆ. ಮಂಗಳವಾರ ಕಾಸರಗೋಡು, ಕಣ್ಣೂರು, ವಯನಾಡು, ಕೋಜಿಕ್ಕೋಡ್, ಮಲಪ್ಪುರಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಆಗಿದೆ

Post a Comment

0 Comments