Ticker

6/recent/ticker-posts

ಕುಂಬ್ಡಾಜೆ ಗಣೇಶೋತ್ಸವದ ಆಮಂತ್ರಣ ಪತ್ರಿಕಾ ಬಿಡುಗಡೆ ಜೂನ್ 22ಕ್ಕೆ


 ಕುಂಬ್ಡಾಜೆ: ಇಲ್ಲಿನ 2ನೇ ವರ್ಷದ ಸಾರ್ವಜನಿಕ  ಶ್ರೀ ಗಣೇಶೋತ್ಸವವು 2025 ಆಗಸ್ಟ್ 27 ಕ್ಕೆ ಮವ್ವಾರಿನ ಶ್ರೀ ಗಣೇಶ ಭಜನಾ ಮಂದಿರದಲ್ಲಿ ನಡೆಯಲಿರುವುದು. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ‌ ಇದೇ ಬರುವ 2025 ಜೂನ್ 22 ನೇ ಆದಿತ್ಯವಾರ ಬೆಳಗ್ಗೆ  7.30 ಕ್ಕೆ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಜರಗಲಿದೆ.  ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು  ಶ್ರೀಮತಿ ಜಯಲಕ್ಷ್ಮಿ ಶಿವಶಂಕರ್ ನೆಕ್ರಾಜೆ ರವರು ನೆರವೇರಿಸುವರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ರಾಮಾಚಂದ್ರ ಮಾರ್ಪನಡ್ಕರವರು ಅಧ್ಯಕ್ಷತೆ ವಹಿಸಲಿರುವರು. ಅಗಲ್ಪಾಡಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಉಪ್ಪಂಗಳ ವಾಸುದೇವ ಭಟ್ ಸಹಿತ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

Post a Comment

0 Comments