ಬೀದಿ ನಾಯಿ ಕಡಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 5 ವರ್ಚದ ಬಾಲಕ ಹುಚ್ಚು ನಾಯಿ ರೋಗದಿಂದಾಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ತಮಿಳುನಾಡು ಸೇಲಂ ನಿವಾಸಿ ದಂಪತಿಗಳ ಪುತ್ರ ಹರಿತ್(5) ಮೃತಪಟ್ಟ ಬಾಲಕ. ಕಣ್ಣೂರು ಪಯ್ಯಾಂಬಲದಲ್ಲಿ ವಾಸಿಸುವ ಕುಟುಂಬ ಕೂಲಿ ಕೆಲಸ ಮಾಡುತ್ತಿದೆ. ಹರಿತ್ ಯುಕೆಜಿ ವಿದ್ಯಾರ್ಥಿಯಾಗಿದ್ದಾನೆ. ಮೇ.31 ರಂದು ಪಯ್ಯಾಂಬಲಂ ಬೀಚ್ ಬಳಿ ಆಟವಾಡುತ್ತಿದ್ದಾಗ ಬಾಲಕನಿಗೆ ಬೀದಿ ನಾಯಿ ಕಚ್ಚಿತ್ತು. ಕೈ ಕಾಲಿಗೆ ಗಂಭೀರ ಗಾಯಗೊಂಡ ಬಾಲಕನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಈ ವೇಳೆ ಹುಚ್ಚು ನಾಯಿ ರೋಗದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಯಿತು. ರೋಗ ಉಲ್ಬಣಗೊಂಡ ಬಾಲಕ ಇಂದು (ಶನಿವಾರ) ಮಧ್ಯಾಹ್ನ ಕೊನೆಯುಸಿರೆಳೆದನೆಂದು ತಿಳಿದು ಬಂದಿದೆ
0 Comments