Ticker

6/recent/ticker-posts

ರಾಜ್ಯದಲ್ಲಿ ಅತಿ ತೀವ್ರ ಮಳೆ; 7 ಜಿಲ್ಲೆ, 4 ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ, ತ್ರಿಶೂರು ಬಳಿ ಕಟ್ಟಡ ಕುಸಿದು 3 ಮಂದಿ ಇತರ ರಾಜ್ಯ ಕಾರ್ಮಿಕರು ಮೃತ್ಯು


 ತಿರುವನಂತಪುರಂ: ಇಂದು ಸಹ ರಾಜ್ಯದಲ್ಲಿ ಭಾರೀ ಪ್ರಮಾಣದ ಮಳೆ ಬರಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 7 ಜಿಲ್ಲೆಗಳಲ್ಲಿ ಹಾಗೂ  4 ತಾಲೂಕುಗಳಲ್ಲಿ ಶಿಕ್ಷಣ ಕೇಂದ್ರಗಳಿಗೆ ರಜೆ ನೀಡಲಾಗಿದೆ. ತ್ರಿಶೂರು ಕೊಡಕ್ಕರದಲ್ಲಿ ಮನೆ ಕುಸಿದು ಬಿದ್ದು ಮೂರು ಮಂದಿ ಅನ್ಯ ರಾಜ್ಯ ಕಾರ್ಮಿಕರು ಮೃತಪಟ್ಟಿದ್ದಾರೆ.

ಎರ್ನಾಕುಲಂ, ತ್ರಿಶೂರ್, ಕೊಟ್ಟಯಂ, ಇಡುಕ್ಕಿ, ಪಾಲಕ್ಕಾಡ್, ಪತ್ತನಂತಿಟ್ಟ, ವಯನಾಡ್  ಜಿಲ್ಲೆಗಳಲ್ಲಿ ಶಿಕ್ಷಣ ಕೇಂದ್ರಗಳಿಗೆ ರಜೆ ಸಾರಲಾಗಿದೆ. ಅಲ್ಲದೆ‌ನಿಲಂಬೂರು, ಕುಅ್ಟನಾಡು, ಚೇರ್ತಲ, ಇಡುಕ್ಕಿ  ತಾಲೂಕುಗಳಲ್ಲಿ ಸಹ ಶಿಕ್ಷಣ ಕೇಂಧರಗಳಿಗೆ ರಜೆ ಸಾರಲಾಗಿದೆ.

    ತ್ರಿಶೂರು ಕೊಡಗರದಲ್ಲಿ 40 ವರ್ಷ ಹಳೆಯ ಮನೆ ಕುಸಿದು ಬಿದ್ದು ಮೂರು ಮಂದಿ ಇತರ ರಾಜ್ಯ ಕಾರ್ಮಿಕರು ಮೃತಪಟ್ಟಿದ್ದಾರೆ. ರಾಹುಲ್(19), ರೂಪೇಲ್(21),ಆಲಂ(20) ಮೃತಪಟ್ಟವರು‌. ಒಟ್ಟು 10 ಮಂದಿ ಈ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಕಟ್ಟಡ ಕುಸಿಯುತ್ತಿದ್ದಂತೆಯೇ 7 ಮಂದಿ ಹೊರಗೋಡಿದ್ದಾರೆ. ಇಂದು (ಶುಕ್ರವಾರ) ಬೆಳಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ.

ಇಂದು ಕಾಸರಗೋಡು ಸಹಿತ ವಿವಿದ ಜಿಲ್ಲೆಯಲ್ಲಿ ಸಹ ಬಿರುಸಿನ ಮಳೆ ಬರಲಿದೆ

Post a Comment

0 Comments