ನೀರ್ಚಾಲು: ವಿಶ್ವ ಪರಿಸರ ದಿನದ ಅಂಗವಾಗಿ ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯಲ್ಲಿ ಕೃಷಿಕರೊಂದಿಗೆ ಸಂದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಊರಿನ ಖ್ಯಾತ ಕೃಷಿಕ ನಾರಾಯಣ ನಾಯ್ಕ ಪಾಡಲಡ್ಕ ಅವರು ವಿವಿಧ ಬಗೆಯ ಔಷಧೀಯ ಸಸ್ಯಗಳನ್ನು ಮಕ್ಕಳಿಗೆ ಪರಿಚಯಿಸುವುದರೊಂದಿಗೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.ದಿನಾಚರಣೆಯ ಸವಿ ನೆನಪಿಗಾಗಿ
ಶಾಲಾ ಪರಿಸದಲ್ಲಿ ಗಿಡಗಳನ್ನು ನೆಡಲಾಯಿತು. ಮುಖ್ಯ ಅತಿಥಿಗಳೊಂದಿಗೆ ಪೋಷಕರಾದ ಚಂದ್ರಗೋಪಾಲ ಅವರು ಸಹಕರಿಸಿದರು.ಪರಿಸರ ಹಾಗೂ ವಿಜ್ಞಾನ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮವು ಆಯೋಜನೆಗೊಂಡಿತ್ತು. ಹಿರಿಯ ಆಧ್ಯಾಪಿಕೆ ಮುಕಾಂಬಿಕಾ, ಸ್ಟಾಫ್ ಸೆಕ್ರೆಟರಿ ಪ್ರಶಾಂತ ಕುಮಾರ್ ಬಿ, ಎಸ್ ಆರ್ ಜಿ ಕನ್ವೀನರ್ ದಿನ ಟೀಚರ್, ಅಬ್ದುಲ್ ಸಲಾಂ ಶುಭ ಹಾರೈಸಿದರು.
ಬೆಳಗ್ಗೆ ನಡೆದ ವಿಶೇಷ ಅಸೆಂಬ್ಲಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಎ. ರಾಧಾಕೃಷ್ಣನ್ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು. ಮಕ್ಕಳು ಪರಿಸರ ದಿನದ ಪ್ರತಿಜ್ಞೆ ಸ್ವೀಕರಿಸಿದರು.
ಈಕೋ ಕ್ಲಬ್ ಕನ್ವೀನರ್ ಜ್ಯೋತಿ ಟೀಚರ್ ಸ್ವಾಗತಿಸಿ ಅಧ್ಯಾಪಕ ಅನ್ವಿತ್ ಎಸ್. ವಂದಿಸಿದರು.
0 Comments