Ticker

6/recent/ticker-posts

ತಳಂಗರೆ ಮಾಲಿಕ್ ದಿನಾರ್ ಮಸೀದಿಯಲ್ಲಿ ನಡೆದ ಧಾರ್ಮಿಕ‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಬೆಂಗಳೂರಿನ ಯುವಕ ಕೊಳದಲ್ಲಿ ಮುಳುಗಿ ಮೃತ್ಯು


 ಕಾಸರಗೋಡು:  ಮಸೀದಿಯಲ್ಲಿ ನಡೆದ ಸಿಯಾರತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಯುವಕ ಮಸೀದಿಯ ಮುಂಭಾಗದ ಕೊಳದಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಇಂದು (ಬುದವಾರ) ಮಧ್ಯಾಹ್ನ 11 ಗಂಟೆಗೆ ತಳಂಗರೆ ಮಾಲಿಕ್ ದೀನಾರ್ ಮಸೀದಿಯ ಮುಂಭಾಗದ ಕೊಳದಲ್ಲಿ ಈ ದುರ್ಘಟನೆ ನಡೆದಿದೆ. ಮೃತಪಟ್ಟವರನ್ನು ಬೆಂಗಳೂರು ಡಿ.ಜೆ.ಹಳ್ಳಿ ಪೊಲೀಸ್ ಸ್ಟೇಶನ್ ವ್ಯಾಪ್ತಿಯ ತಾನಿ ರಸ್ತೆಯ  ಫೈಸಾನ್(22) ಎಂದು ಗುರುತಿಸಲಾಗಿದೆ. ಇವರ ತಮ್ಮ ಸಕ್ಲೀನಿ(20) ಯನ್ನು ರಕ್ಷೊಸಲಾಗಿದೆ. 


   ಕೊಳದಲ್ಲಿ ಸ್ನಾನ ಮಾಡುವ ವೇಳೆ ಸಕ್ಲೀನ್ ಮುಳುಗಿದ್ದು ಈತನನ್ನು ರಕ್ಷಿಸಲು ಫೈಸಾನ್ ಕೊಳಕ್ಕಿಳಿದನೆನ್ನಲಾಗಿದೆ. ಘಟನೆ ಅರಿತು ಧಾವಿಸಿ ಬಂದ ಅಗ್ನಿಶಾಮಕ ದಳ ಸಿಬಂದಿಗಳು‌ ಫೈಸಾನ್  ಹಾಗೂ ಸಕ್ಲೀನ್ ರನ್ನು ಮೇಲಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಫೈಸಾನ್ ಮೃತಪಟ್ಡಿದ್ದನು.  ಮೃತ ಫೈಸಾನ್ ಕುಡುಂಬ ಸದಸ್ಯರಾದ 11 ಮಂದಿಯ ತಂಡ ನಿನ್ನೆ (ಮಂಗಳವಾರ) ಸಂಜೆ ಮಾಲಿಕ್ ದೀನಾರ್ ಮಸೀದಿಗೆ ಆಗಮಿಸಿತ್ತು.

Post a Comment

0 Comments