Ticker

6/recent/ticker-posts

ಬಂಗ್ರ ಮಂಜೇಶ್ವರ ಪೊಯ್ಯಕಂಡದ ಜೀನಸಿ ವ್ಯಾಪಾರಿ ಮಜಿಬೈಲ್ ನಿವಾಸಿ ಅರುಣ್ (48) ನಿಧನ.


ಮಂಜೇಶ್ವರ: ಬಂಗ್ರ ಮಂಜೇಶ್ವರ ಪೊಯ್ಯಕಂಡ ನದಿತೀರ ಬಳಿ ಹಲವು ವರ್ಷಗಳಿಂದ ಜೀನಸಿ ಸಾಮಗ್ರಿ ವ್ಯಾಪಾರಿ ನಡೆಸುತ್ತಿದ್ದ ಮಜಿಬೈಲ್ ನಿವಾಸಿ ಅರುಣ್ (48) ಅಸೌಖ್ಯ ನಿಮ್ಮಿತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಸಂಜೆ ನಿಧನರಾದರು. ಅಂತ್ಯ ಸಂಸ್ಕಾರ ಅಪರಾಹ್ನ 1 ಗಂಟೆಗೆ ರಾಮತ್ತಮಜಾಲ್ ಸಾರ್ವಜನಿಕ ರುಧ್ರ ಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರು ಬಾಬು - ಸೇಸಮ್ಮ ದಂಪತಿಗಳ ಪುತ್ರನಾಗಿದ್ದು, ಪತ್ನಿ: ಸುನೀತಾ, ಸುಪುತ್ರ: ಅಭೀಶ್, ಸಹೋದರಿಯರಾದ: ಪುಷ್ಪ, ಭಾರತಿ, ಸರಿತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Post a Comment

0 Comments