Ticker

6/recent/ticker-posts

ಗ್ರಾಮ ಪಂಚಾಯತು ಅಧ್ಯಕ್ಷರ ವಾರ್ಡಿನ ಗ್ರಾಮ ಸಭೆಗೆ ಬೆರಳೆಣಿಕೆಯ ಮಂದಿ, ಪ್ರಶ್ನಿಸಿದ ಕಾಂಗ್ರೆಸ್ ಮುಖಂಡ; ಕುಂಬ್ಡಾಜೆಯಲ್ಲಿ ಹೊಸ ವಿವಾದ


 ಕುಂಬ್ಡಾಜೆ: ಕುಂಬ್ಡಾಜೆ ಗ್ರಾಮ ಪಂಚಾಯತು ಅಧ್ಯಕ್ಷರ ವಾರ್ಡಿನಲ್ಲಿ ನಡೆದ ಗ್ರಾಮ ಸಭೆಯಲ್ಲಿ ಜನರಿಲ್ಲದಿರುವ ಬಗ್ಗೆ ಕಾಂಗ್ರೆಸ್ ಮುಖಂಡ ಪ್ರಶ್ನೆ ಮಾಡಿರುವುದು ವಿವಾದಕ್ಕೆ ತಿರುಗಿದೆ. ಗ್ರಾಮ ಪಂಚಾಯತು ಅಧ್ಯಕ್ಷ ಹಾಗೂ ಮುಸ್ಲಿಂ ಲೀಗ್ ನೇತಾರ ಹಮೀದ್ ಪೊಸೊಳಿಗೆ ಪ್ರತಿನಿಧೀಕರಿಸುವ 6 ನೇ ವಾರ್ಡಿನ ಗ್ರಾಮ ಸಭೆಯಲ್ಲಿ ಬೆರಳೆಣಿಕೆಯ ಜನರು ಮಾತ್ರ ಭಾಗವಹಿಸಿದರೆಂದು ಕಾಂಗ್ರೆಸ್ ಮಂಡಲ ಮಾಜಿ ಅಧ್ಯಕ್ಷ ಹಾಗೂ ಬ್ಲಾಕ್ ಸಮಿತಿಯ ಉಪಾಧ್ಯಕ್ಷ ಪ್ರಸಾದ್ ಭಂಡಾರಿ ದೂರಿದ್ದಾರೆ. ಮಾತ್ರವಲ್ಲ ಈ ಬಗ್ಗೆ ಅವರು ಪತ್ರಿಕೆಗಳಲ್ಲಿ ಬಹಿರಂಗ ಹೇಳಿಕೆಯನ್ನು ಸಹ ನೀಡಿದ್ದಾರೆ.

   6 ನೇ ವಾರ್ಡು ಗ್ರಾಮ ಸಭೆಯು ನಿನ್ನೆ (ಸೋಮವಾರ) ಮದ್ಯಾಹ್ನ 2.30 ಕ್ಕೆ ಬೆಳಿಂಜ ಅಂಗನವಾಡಿಯಲ್ಲಿ ನಡೆಯಬೇಕಿತ್ತು. ಗ್ರಾಮ ಸಭೆಗೆ ಕನಿಷ್ಠ 92 ಜನರಾದರೂ ಬರಬೇಕಿದ್ದು 45 ಮಂದಿ ಮಾತ್ರ ಇದ್ದರೆನ್ನಲಾಗಿದೆ. ಅಲ್ಲದೆ ಫಲಾನುಭವಿಗಳ ಪಟ್ಟಿ ಓದಿ ಹೇಳಲು ಸಹ ಯಾರೂ ಸಿದ್ದರಾಗಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗಲೂ ಸಮರ್ಪಕವಾದ ಉತ್ತರ ಲಭಿಸಲಿಲ್ಲ ಎಂದು ಪಸಾದ್ ಭಂಡಾರಿ ಅವರು ಹೇಳಿದ್ದಾರೆ. ಈ ಬಗ್ಗೆ ಅವರು ಗ್ರಾಮ ಪಂಚಾಯತಿನ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಿದ್ದಾರೆ

Post a Comment

0 Comments