ತಂದೆಯ ಕೈಯಿಂದ ಕೆಳಗೆ ಬಿದ್ದ ನಾಲ್ಕು ವರ್ಷದ ಬಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ತಿರುವನಂತಪುರಂ ಪಾರಶಾಲ ಬಳಿಯ ರಜಿನ್- ಧನ್ಯ ದಂಪತಿಯ ಏಕಪುತ್ರ ಇಮಾನ್(4) ಮೃತಪಟ್ಟ ಬಾಲಕ. ನಿನ್ನೆ (ಮಂಗಳವಾರ) ಈ ಘಟನೆ ನಡೆದಿದೆ.
ನಿನ್ನೆ ಬೆಳಗ್ಗೆ ನರ್ಸರಿ ಶಾಲೆಗೆ ಬಿಡಲು ತಂದೆ ರಜಿನ್, ಮಗನನ್ನು ಎತ್ತಿಕೊಂಡಿದ್ದನು. ಈ ವೇಳೆ ಮಗುವಿನ ಆಟಿಕೆ ಮೇಲೆ ಕಾಲಿಟ್ಡಿದ್ದು ರಜಿನ್ ಕೆಳಗೆ ಬಿದ್ದನೆನ್ನಲಾಗಿದೆ.ರಜಿನ್ ಜತೆಗೆ ಬಾಲಕ ಇಮಾನ್ ಸಹ ಎಸೆಯಲ್ಪಟ್ಟಿದ್ದು ತಲೆಗೆ ಗಂಭೀರ ಗಾಯವಾಗಿದೆ. ಕೂಡಲೇ ಎಸ್.ಐ.ಟಿ.ಆಸ್ಪತ್ರೆಗೆ ಕೊಂಡೊಯ್ದು ತುರ್ತು ಶಸ್ತ್ರ ಕ್ರಿಯೆ ನಡೆಸಿದರೂ ಸಾಯಂಕಾಲದ ವೇಳೆ ಇಮಾನ್ ಕೊನೆಯುಸಿರೆಳೆದನು. ಮಗುವಿನ ತಲೆಗೆ ಗಂಭೀರ ಗಾಯವಾಗಿತ್ತೆಂದೂ ಆಂತರಿಕ ರಕ್ತಸ್ರಾವವಿತ್ತೆಂದೂ ಇದರಿಂದಾಗಿ ಸಾವು ಸಂಭವಿಸಿದೆಯೆಂದೂ ಆಸ್ಪತ್ರೆ ಮೂಲಗಳು ತಿಳಿಸಿವೆ.
0 Comments