ಪಂಜಿಕಲ್ಲು: ಕೇರಳದ ಅರಣ್ಯಗಳ ಅಭಿವೃದ್ದಿಪಡಿಸುವ ಸಲುವಾಗಿ ಕಾಡಿನಲ್ಲಿ ಆಹಾರ ಉತ್ಪನ್ನಗಳ ಲಭ್ಯತೆ ಖಾತರಿಪಡಿಸುವ ನಿಟ್ಡಿನಲ್ಲಿ FFD ಯೋಜನೆಯ ಅಂಗವಾಗಿ ಅರಣ್ಯ ಇಲಾಖೆಯ ಪರಪ್ಪ ಸೆಕ್ಷನ್ ಸಿಬಂದಿಗಳ ನೇತೃತ್ವದಲ್ಲಿ ಪಂಜಿಕಲ್ ಶಾಲೆಯಲ್ಲಿ ಬೀಜ ಬಿತ್ತುವ ಕಾರ್ಯಕ್ರಮ ನಡೆಯಿತು.
ಶಿಕ್ಷಕರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಜತೆಗೂಡಿದರು. ಪಂಜಿಕಲ್ ಅರಣ್ಯ ವಲಯದಲ್ಲಿ ಬೀಜ ಬಿತ್ತಲಾಯಿತು. ಮುಖ್ಯೋಪಾಧ್ಯಾಯರಾದ ವಿಶುಪಾಲ.ಬಿ, ಹಿರಿಯ ಶಿಕ್ಷಕಿ ವಿಜಯಲಕ್ಷ್ಮಿ ಪಿ, ಅರಣಯ ಇಲಾಖೆಯ ಅಧಿಕಾರಿಗಳಾದ ವಿನೋದ್ ಕುಮಾರ್, ಮಂಜುಶ, ಮಹೇಶ್, ಅರುಣ್, ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು
0 Comments